ದೇಶದ ಬಹುತೇಕ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಹರ್ಯಾಣಾದ ಬರೋಡಾದಲ್ಲಿ ಕಮಲ ಬಾಡಿದೆ. ಇಲ್ಲಿ ಜಯ ಕೈ ಪಾಲಿಗೆ ದಕ್ಕಿದೆ.
ಹರ್ಯಾಣದ ಸೋನಿಪತ್ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಇಂದು ರಾಜ್ ನರ್ವಾಲ್ ಅವರು ಬಿಜೆಪಿಯ ಯೋಗೇಶ್ವರ್ ದತ್ (ಒಲಿಂಪಿಯನ್ ಕುಸ್ತಿಪಟು)ಅವರನ್ನು ಸೋಲಿಸಿದ್ದಾರೆ.
ಈ ವಿಧಾನಸಭೆಯ ಕಾಂಗ್ರೆಸ್ ಶಾಸಕರಾಗಿದ್ದ ಶ್ರೀಕೃಷ್ಣ ಹೂಡಾ ನಿಧನ ಹೊಂದಿದ ಕಾರಣ ಚುನಾವಣೆ ನಡೆಸಲಾಗಿತ್ತು. ಯೋಗೇಶ್ವರ್ ದತ್ ಅವರು 2019ರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಶ್ರೀಕೃಷ್ಣ ಹೂಡಾ ವಿರುದ್ಧ ಸೋತಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದಾರೆ.
ಕೃಷಿ ಮಸೂದೆ ಪಾಸ್ ಆದಾಗ ಅತಿ ಹೆಚ್ಚು ಪ್ರತಿಭಟನೆ ಆಗಿದ್ದು ಹರ್ಯಾಣ ಮತ್ತು ಪಂಜಾಬ್ಗಳಲ್ಲಿ. ಕಾಂಗ್ರೆಸ್ ಗೆಲುವಿಗೆ ಈ ಬಿಲ್ ಪಾಸ್ ಆಗಿದ್ದು ವರವಾಯಿತು. ಬಿಜೆಪಿಗೆ ಅದೇ ಮುಳ್ಳಾಯಿತು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಕಳೆದ ವರ್ಷ ವಿಧಾನಸಭಾ ಚುನಾವಣೆಯ ಪೂರ್ವ ಬಿಜೆಪಿ ಸೇರ್ಪಡೆಯಾಗಿದ್ದ, 2012ರ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ದತ್ ಅವರಿಗೆ ಈ ಬಾರಿಯೂ ನಿರಾಸೆಯೇ ಆಗಿದೆ. ಕಾಂಗ್ರೆಸ್ ಪರ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಅವರ ಪುತ್ರ, ಮಾಜಿ ಸಂಸದ ದೀಪೇಂದರ್ ಸಿಂಗ್ ಹೂಡಾ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾದ ಕುಮಾರಿ ಸೆಲ್ಜಾ ಭರ್ಜರಿ ಪ್ರಚಾರ ನಡೆಸಿದ್ದರು. (ಏಜೆನ್ಸೀಸ್)
ಪಟಾಕಿ ಹೊಡೆಯಿರಿ, ರಾಮ ಬಂದಿದ್ದನ್ನು ಸಂಭ್ರಮಿಸಿ! ಪಟಾಕಿ ಬ್ಯಾನ್ ಮಾಡಲಾಗದು ಎಂದು ಸಿಎಂ