ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿಯೊಂದಿಗೆ ಮಹಾವಿಕಾಸ ಅಘಡಿ ಮಾಡಿಕೊಂಡು ಆಡಳಿತ ಪಕ್ಷವಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಇದೀಗ ಶಿವಸೇನೆಗೆ ಟಕ್ಕರ್ ನೀಡಲು ಸಿದ್ಧವಾಗಿದೆ. ಇದರಿಂದಾಗಿ 30 ವರ್ಷಗಳ ಕಾಲ ಶಿವಸೇನೆಯ ಕೈಲಿದ್ದ ಬೃಹನ್ಮುಂಬೈ ಪಾಲಿಕೆ ಮುಂದಿನ ಆಡಳಿತಾವಧಿಗೆ ಪಕ್ಷದ ಕೈ ಬಿಟ್ಟು ಹೋಗಲಿದೆಯೇ ಎನ್ನುವ ಅನುಮಾನಗಳು ಆರಂಭವಾಗಿವೆ.
ಇದನ್ನೂ ಓದಿ: ಪ್ರಶಾಂತ್ ಸಂಬರಗಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ!
2022ಕ್ಕೆ ಬೃಹನ್ಮುಂಬೈ ನಗರ ಪಾಲಿಕೆಗೆ (ಬಿಎಂಸಿ) ಚುನಾವಣೆ ನಡೆಯಲಿದೆ. ಕಳೆದ 30 ವರ್ಷಗಳಿಂದ ಬಿಎಂಸಿ ಆಡಳಿತವನ್ನು ಎನ್ಡಿಎ ಸರ್ಕಾರದೊಂದಿಗಿನ ಮೈತ್ರಿಯಿಂದಾಗಿ ಶಿವಸೇನೆ ತನ್ನದಾಗಿಸಿಕೊಂಡಿದೆ. ಆದರೆ ಈ ವರ್ಷ ಎನ್ಡಿಎಗೆ ಕೈ ಕೊಟ್ಟಿರುವ ಶಿವಸೇನೆ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಇದೀಗ ಬಿಎಂಸಿ ವಿಚಾರದಲ್ಲಿ ಕಾಂಗ್ರೆಸ್ ಶಿವಸೇನೆಗೆ ಕೈ ಕೊಡಲು ಸಿದ್ಧವಾಗಿದೆ.
2022ರ ಬಿಎಂಸಿ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ, ಒಬ್ಬಂಟಿಯಾಗಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ನ ನಾಯಕ ರವಿ ರಾಜಾ ಹೇಳಿದ್ದಾರೆ. ಅತ್ತ ಬಿಜೆಪಿ ಕೂಡ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದೆ. ಇದರಿಂದಾಗಿ ಶಿವಸೇನೆಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ: ಸಂಪುಟದಲ್ಲಿ ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಕಷ್ಟ ಎಂದ ಸಚಿವ ಈಶ್ವರಪ್ಪ
2017ರಲ್ಲಿ ನಡೆದ ಬಿಎಂಸಿ ಚುನಾವಣೆಯಲ್ಲಿ 227 ಸ್ಥಾನಗಳ ಪೈಕಿ ಬಿಜೆಪಿ 82 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಶಿವಸೇನೆ 86 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಸಿ) ಆರು ಸ್ಥಾನಗಳಲ್ಲಿ ಜಯ ಕಂಡಿತ್ತು. ನಂತರ ಎಂಎನ್ಸಿ ಕೂಡ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತು. ಉಳಿದಂತೆ ಕಾಂಗ್ರೆಸ್ 30 ಮತ್ತು ಎನ್ಸಿಪಿ 9 ಸ್ಥಾನಗಳಲ್ಲಿ ಜಯ ಸಾಧಿಸಿದ್ದವು. (ಏಜೆನ್ಸೀಸ್)
ರೈಲಿನ ಮೇಲೆ ಸೆಲ್ಫೀಗೆ ಫೋಸ್ ಕೊಡುತ್ತಿದ್ದ ಬಾಲಕ ವಿದ್ಯುತ್ ತಗುಲಿ ಸತ್ತೇ ಹೋದ
ಬಿಹಾರದ ನಿತೀಶ್ ಸರ್ಕಾರದಲ್ಲಿ ಮೊದಲ ವಿಕೆಟ್ ಪತನ; ಎನ್ಡಿಎಗೆ ಬಂತು ಸಂಕಷ್ಟ