More

    ಮುಂಬೈನಲ್ಲಿ ಶಿವಸೇನೆಗೆ ಉಲ್ಟಾ ಹೊಡೆದ ಕಾಂಗ್ರೆಸ್​; ಸ್ವತಂತ್ರವಾಗಿ ಸ್ಪರ್ಧಿಸೋಕೆ ಕಾಂಗ್ರೆಸ್​ ರೆಡಿ

    ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿಯೊಂದಿಗೆ ಮಹಾವಿಕಾಸ ಅಘಡಿ ಮಾಡಿಕೊಂಡು ಆಡಳಿತ ಪಕ್ಷವಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್​ ಇದೀಗ ಶಿವಸೇನೆಗೆ ಟಕ್ಕರ್​ ನೀಡಲು ಸಿದ್ಧವಾಗಿದೆ. ಇದರಿಂದಾಗಿ 30 ವರ್ಷಗಳ ಕಾಲ ಶಿವಸೇನೆಯ ಕೈಲಿದ್ದ ಬೃಹನ್ಮುಂಬೈ ಪಾಲಿಕೆ ಮುಂದಿನ ಆಡಳಿತಾವಧಿಗೆ ಪಕ್ಷದ ಕೈ ಬಿಟ್ಟು ಹೋಗಲಿದೆಯೇ ಎನ್ನುವ ಅನುಮಾನಗಳು ಆರಂಭವಾಗಿವೆ.

    ಇದನ್ನೂ ಓದಿ: ಪ್ರಶಾಂತ್ ಸಂಬರಗಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ!

    2022ಕ್ಕೆ ಬೃಹನ್ಮುಂಬೈ ನಗರ ಪಾಲಿಕೆಗೆ (ಬಿಎಂಸಿ) ಚುನಾವಣೆ ನಡೆಯಲಿದೆ. ಕಳೆದ 30 ವರ್ಷಗಳಿಂದ ಬಿಎಂಸಿ ಆಡಳಿತವನ್ನು ಎನ್​ಡಿಎ ಸರ್ಕಾರದೊಂದಿಗಿನ ಮೈತ್ರಿಯಿಂದಾಗಿ ಶಿವಸೇನೆ ತನ್ನದಾಗಿಸಿಕೊಂಡಿದೆ. ಆದರೆ ಈ ವರ್ಷ ಎನ್​ಡಿಎಗೆ ಕೈ ಕೊಟ್ಟಿರುವ ಶಿವಸೇನೆ ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಇದೀಗ ಬಿಎಂಸಿ ವಿಚಾರದಲ್ಲಿ ಕಾಂಗ್ರೆಸ್​ ಶಿವಸೇನೆಗೆ ಕೈ ಕೊಡಲು ಸಿದ್ಧವಾಗಿದೆ.

    2022ರ ಬಿಎಂಸಿ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ, ಒಬ್ಬಂಟಿಯಾಗಿ ಸ್ಪರ್ಧಿಸುವುದಾಗಿ ಕಾಂಗ್ರೆಸ್​ನ ನಾಯಕ ರವಿ ರಾಜಾ ಹೇಳಿದ್ದಾರೆ. ಅತ್ತ ಬಿಜೆಪಿ ಕೂಡ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದೆ. ಇದರಿಂದಾಗಿ ಶಿವಸೇನೆಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

    ಇದನ್ನೂ ಓದಿ: ಸಂಪುಟದಲ್ಲಿ ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಕಷ್ಟ ಎಂದ ಸಚಿವ ಈಶ್ವರಪ್ಪ

    2017ರಲ್ಲಿ ನಡೆದ ಬಿಎಂಸಿ ಚುನಾವಣೆಯಲ್ಲಿ 227 ಸ್ಥಾನಗಳ ಪೈಕಿ ಬಿಜೆಪಿ 82 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಶಿವಸೇನೆ 86 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ರಾಜ್​ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್​ಸಿ) ಆರು ಸ್ಥಾನಗಳಲ್ಲಿ ಜಯ ಕಂಡಿತ್ತು. ನಂತರ ಎಂಎನ್​ಸಿ ಕೂಡ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತು. ಉಳಿದಂತೆ ಕಾಂಗ್ರೆಸ್​ 30 ಮತ್ತು ಎನ್​ಸಿಪಿ 9 ಸ್ಥಾನಗಳಲ್ಲಿ ಜಯ ಸಾಧಿಸಿದ್ದವು. (ಏಜೆನ್ಸೀಸ್​)

    ರೈಲಿನ ಮೇಲೆ ಸೆಲ್ಫೀಗೆ ಫೋಸ್​ ಕೊಡುತ್ತಿದ್ದ ಬಾಲಕ ವಿದ್ಯುತ್​ ತಗುಲಿ ಸತ್ತೇ ಹೋದ

    ಬಿಹಾರದ ನಿತೀಶ್​ ಸರ್ಕಾರದಲ್ಲಿ ಮೊದಲ ವಿಕೆಟ್​ ಪತನ; ಎನ್​ಡಿಎಗೆ ಬಂತು ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts