ನವದೆಹಲಿ: ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದಿಂದ ಅಚ್ಚರಿಯ ಆಯ್ಕೆಯನ್ನು ಮಾಡಿದೆ.
ಕರ್ನಾಟಕದಿಂದ ದೆಹಲಿ ಮೂಲದ ಅಜಯ್ ಮಾಕೆನ್, ಹಾಲಿ ಸದಸ್ಯರಾದ ಡಾ. ಸೈಯದ್ ನಾಸೀರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ. ಮಧ್ಯಪ್ರದೇಶದಿಂದ ಅಶೋಕ್ ಸಿಂಗ್ ಮತ್ತು ತೆಲಂಗಾಣದಿಂದ ರೇಣುಕಾ ಚೌಧರಿ ಮತ್ತು ಎಂ.ಅನಿಲ್ ಕುಮಾರ್ ಯಾದವ್ಗೆ ಟಿಕೆಟ್ ನೀಡಲಾಗಿದೆ.
ಫೆಬ್ರವರಿ 27ರಂದು ನಡೆಯುವ ಚುನಾವಣೆಯಲ್ಲಿ ರಾಜ್ಯದಿಂದ ನಾಲ್ಕು ಸ್ಥಾನಗಳು ಖಾಲಿಯಾಗಲಿದ್ದು, ಕಾಂಗ್ರೆಸ್ನಿಂದ ಮೂರು ಹಾಗೂ ಬಿಜೆಪಿಯಿಂದ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿಯಿಂದ ಬಾಗಲಕೋಟೆ ಮೂಲದ ಮಾಜಿ ವಿಧಾನಪರಿಷತ್ ಸದಸ್ಯ ನಾರಾಯಣ ಭಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ.