ಬೆಂಗಳೂರು: ಇದೀಗ ಕಾಂಗ್ರೆಸ್ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಟಿಕೆಟ್ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದೆ. ಈ ಮೂಲಕ ಚುನಾವಣಾ ಕಣವನ್ನು ಮತ್ತಷ್ಟು ರೋಚಕವಾಗಿದೆ. ಈಗ ಎರಡು ಪಟ್ಟಿಗಳಲ್ಲಿ ಬಾಕಿಯಾಗಿದ್ದ 43 ಕ್ಷೇತ್ರಗಳನ್ನು ಮೂರನೇ ಪಟ್ಟಿಯಲ್ಲಿ ಘೋಷಿಸಲಾಗಿದ್ದು 15 ಕ್ಷೇತ್ರಗಳು ಬಾಕಿ ಉಳಿದಿವೆ.
ಈ ಬಾರಿ ಐದು ಹಾಲಿ ಕಾಂಗ್ರೆಸ್ ಶಾಸಕರ ಟಿಕೆಟ್ ಕಥೆ ಏನು ಎನ್ನುವುದು ತಿಳಿದುಬಂದಿದೆ. ಈ ಹಿಂದೆ ಕುಂದಗೋಳ, ಹರಿಹರ, ಪುಲಕೇಶಿ ನಗರ,ಶಿಡ್ಲಘಟ್ಟ, ಲಿಂಗಸೂಗುರು ಟಿಕೆಟ್ ಬಾಕಿ ಇಡಲಾಗಿತ್ತು. ಈ ಸಂಬಂಧಿತ ಕಾಂಗ್ರೆಸ್ ನಿರ್ಧಾರ ಈಗ ಹೊರಬಿದ್ದಿದೆ.
ಕುಂದಗೋಳದಲ್ಲಿ ಇದೀಗ ಹಾಲಿ ಹಾಲಿ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಲಾಗಿದೆ. ಅದಲ್ಲದೇ ಅಥಣಿ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾರಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ. ಕೋಲಾರಕ್ಕೆ ಕೊತ್ತನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದ್ದು ಮತ್ತೆ ನಾಲ್ಕು ಶಾಸಕರ ಹಾಲಿ ಕ್ಷೇತ್ರಗಳು ಖಾಲಿ ಉಳಿದಿವೆ.
ಕೋಲಾರದಿಂದ ಸಿದ್ದುಗಿಲ್ಲ ಟಿಕೆಟ್!
ಅದಲ್ಲದೇ ಸಿದ್ದರಾಮಯ್ಯಗೆ ಕೋಲಾರದಿಂದ ಟಿಕೆಟ್ ನೀಡಲಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಎರಡು ಟಿಕೆಟ್ ಬಯಸಿದ್ದರು. ಆದರೆ ಈಗ ಒಂದೆ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಫರ್ಧೆ ಮಾಡುವುದಕ್ಕೆ ಅವಕಾಶ ಲಭಿಸಿದೆ.
ಯಾವ ಕ್ಷೇತ್ರದಲ್ಲಿ ಯಾರಿಗೆ ಅವಕಾಶ?
ಚಿಕ್ಕಪೇಟೆಯಲ್ಲಿ ಆರ್ ವಿ ದೇವರಾಜ್ ಗೆ ಟಿಕೆಟ್ ನೀಡಲಾಗಿದ್ದು ಇದರಿಂದಾಗಿ ಕಾಂಗ್ರೆಸ್ಸಿನಲ್ಲಿ ಆಕಾಂಕ್ಷಿಗಳ ಬಂಡಾಯ ಸಾಧ್ಯತೆ ಇದೆ. ದಾಸರಹಳ್ಳಿಯಲ್ಲಿ ಧನಂಜಯ ಗೌಡಗೆ ಟಿಕೆಟ್ ನೀಡಲಾಗಿದ್ದು ಇಲ್ಲಿ ಕೂಡ ಆಕಾಂಕ್ಷಿಗಳು ಬಂಡಾಯ ಸಾಧ್ಯತೆ ಇದೆ ಎನ್ನಲಾಗಿದೆ. ತೆರದಾಳ ದಲ್ಲಿ ಉಮಾಶ್ರೀ ಗೆ ಟಿಕೆಟ್ ಮಿಸ್ ಆಗಿದ್ದು ಬೊಮ್ಮನಹಳ್ಳಿಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡಗೆ ಟಿಕೆಟ್ ನೀಡಲಾಗಿದೆ.
ಬೆಳಗಾವಿ ಉತ್ತರದಲ್ಲಿ ಆಸೀಪ್ ಸೆಠ್ ಗೆ ಟಿಕೆಟ್ ನೀಡಲಾಗಿದೆ. ಈ ಹಿಂದೆ ಅನಿಲ್ ಬೆನಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಪ್ರಯತ್ನ ನಡೆಸಿದ್ದರು. ಆದರೆ ಇದೀಗ ಬೆಳಗಾವಿ ಉತ್ತರದಲ್ಲಿ ಆಸೀಪ್ ಸೆಠ್ ಗೆ ಟಿಕೆಟ್ ಕೊಟ್ಟಿರುವ ಹಿನ್ನೆಲೆಯಲ್ಲಿ ಅನಿಲ್ ಬೆನಕೆ ಕಾಂಗ್ರೆಸ್ ಸೇರ್ತಾರ ಇಲ್ಲ ಬಿಜೆಪಿಯಲ್ಲಿ ಉಳಿದುಕೊಳ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.
- ಅಥಣಿ – ಲಕ್ಷ್ಮಣ್ ಸವದಿ
- ಮೂಡಿಗೆರೆ – ನಯನ ಮೋಟಮ್ಮ
- ಅರಸೀಕೆರೆ – ಶಿವಲಿಂಗೇಗೌಡ
- ರಾಯಭಾಗ – ಮಹಾವೀರ್ ಮೋಹಿತ್
- ಅರಬಾವಿ – ಅರವಿಂದ ದಳವಾಯಿ
- ಬೆಳಗಾವಿ ಉತ್ತರ – ಆಸೀಫ್ ಸೇಠ್
- ಬೆಳಗಾವಿ ದಕ್ಷಿಣ – ಪ್ರಭಾವತಿ ಮಾಸ್ತಿಮರಡಿ
- ತೇರದಾಳ – ಸಿದ್ದಪ್ಪ ಕೊಣ್ಣೂರು
- ದೇವರ ಹಿಬ್ಬರಗಿ – ಶರಣಪ್ಪ ಸುಣಗಾರ್
- ಸಿಂಧಗಿ – ಅಶೋಕ್ ಮನಗೊಳಿ
- ಕಲಬುರಗಿ ಗ್ರಾಮೀಣ – ರೇವೂನಾಯಕ್ ಬೆಳಮಗಿ
- ಔರಾದ್ – ಭೀಮ್ ಸೇನ್ ರಾವ್ ಶಿಂಧೆ
- ಮಾನ್ವಿ – ಹಂಪಯ್ಯ ನಾಯಕ್
- ದೇವದುರ್ಗ – ಶ್ರೀದೇವಿ ನಾಯಕ್
- ಸಿಂಧನೂರು – ಹಂಪನಗೌಡ ಬಾದರ್ಲಿ
- ಶಿರಹಟ್ಟಿ – ಸುಜಾತ ದೊಡ್ಡಮನಿ
- ನವಲಗುಂದ – ಕೋನರೆಡ್ಡಿ
- ಕುಂದಗೋಳ – ಕುಸುಮಾ ಶಿವಳ್ಳಿ
- ಕುಮಟಾ – ನಿವೇದಿತ್ ಆಳ್ವಾ
- ಸಿರಗುಪ್ಪ – ಬಿಎಂ ನಾಗರಾಜ್
- ಬಳ್ಳಾರಿ ನಗರ – ನಾ.ರ ಭರತ್ ರೆಡ್ಡಿ
- ಜಗಳೂರು – ದೇವೇಂದ್ರಪ್ಪ
- ಹರಪನಹಳ್ಳಿ – ಎನ್. ಕೊಟ್ರೇಶ್
- ಹೊನ್ನಾಳಿ – ಶಾಂತನಗೌಡ
- ಶಿವಮೊಗ್ಗ ಗ್ರಾಮೀಣ – ಶ್ರೀನಿವಾಸ್ ಕರಿಯಣ್ಣ
- ಶಿವಮೊಗ್ಗ – ಎಚ್.ಸಿ ಯೋಗೇಶ್
- ಶಿಕಾರಿಪುರ – ಜಿಬಿ ಮಾಲತೇಶ್
- ಕಾರ್ಕಳ – ಉದಯ್ ಶೆಟ್ಟಿ
- ತರೀಕೆರೆ – ಶ್ರೀನಿವಾಸ್
- ತುಮಕೂರು ಗ್ರಾಮೀಣ – ಷಣ್ಮುಗಪ್ಪ ಯಾದವ್
- ಚಿಕ್ಕಬಳ್ಳಾಪುರ – ಪ್ರದೀಪ್ ಈಶ್ವರ್
- ಕೋಲಾರ – ಕೊತ್ತೂರು ಮಂಜುನಾಥ್
- ದಾಸರಹಳ್ಳಿ – ಧನಂಜಯ್ ಗೌಡ
- ಚಿಕ್ಕಪೇಟೆ – ಆರ್.ವಿ ದೇವರಾಜ್
- ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸ್ ಗೌಡ
- ಬೆಂಗಳೂರು ದಕ್ಷಿಣ – ಆರ್.ಕೆ ರಮೇಶ್
- ಚನ್ನಪಟ್ಟಣ – ಗಂಗಾಧರ್
- ಮದ್ದೂರು - ಉದಯ್ ಗೌಡ
- ಹಾಸನ – ಬನವಾಸಿ ರಂಗಸ್ವಾಮಿ
- ಮಂಗಳೂರು ದಕ್ಷಿಣ – ಜೆ.ಆರ್ ಲೋಬೋ
- ಪುತ್ತೂರು – ಅಶೋಕ್ ರೈ
- ಕೃಷ್ಣರಾಜ – ಎಂ.ಕೆ ಸೋಮಶೇಖರ್
- ಚಾಮರಾಜ – ಹರೀಶ್ ಗೌಡ