More

    VIDEO| ನಮಸ್ಕರಿಸಲಿಲ್ಲವೆಂದು ಯುವಕನ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದ ಕಾಂಗ್ರೆಸ್​ ನಾಯಕನ ಮಗ

    ರಾಂಚಿ: ತನ್ನನ್ನು ನೋಡಿ ನಮಸ್ಕಾರ ಮಾಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್​ ನಾಯಕನ ಪುತ್ರನೋರ್ವ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ದರ್ಪ ಮೆರೆದಿರುವ ಘಟನೆ ಜಾರ್ಖಂಡ್​ನ ಧನ್​​ಬಾದ್​ ಪ್ರದೇಶದಲ್ಲಿ ನಡೆದಿದೆ.

    ರಾಜ್ಯ ಕಾಂಗ್ರೆಸ್​ ಘಟಕದ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿರುವ ರಣವಿಜಯ್​ ಸಿಂಗ್​ ಅವರ ಪುತ್ರ ರಣವೀರ್​ ಸಿಂಗ್​ ತನ್ನ ಬಾಡಿಗಾರ್ಡ್​ ಹಾಗೂ ಸ್ನೇಹಿತರ ಜೊತೆ ಸೇರಿಕೊಂಡು ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆ ಸಂಬಂಧ ಯುವಕನ​ ತಂದೆ ಧನ್​ಬಾದ್​ನ ಸರದಿಹೆಲಾ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಬೆದರಿಕೆ ಪ್ರಕರಣ ದಾಖಲಿಸಿದ್ಧಾರೆ.

    ವೈರಲ್​ ವಿಡಿಯೋದಲ್ಲೇನಿದೆ

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ 20-25 ಮಂದಿ ಅವಾಚ್ಯ ಶಬ್ದಗಳಿಂದ ವ್ಯಕ್ತಿಯೋರ್ವನನ್ನು ನಿಂದಿಸುತ್ತಾ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತದೆ. ಈ ವೇಳೆ ಓರ್ವ ನನ್ನನ್ನು ನೋಡಿ ನೀನು ಯಾಕೆ ನಮಸ್ಕರಿಸಲಿಲ್ಲ ಎಂದು ಹೇಳುತ್ತಿರುವುದು ಕಂಡು ಬರುತ್ತದೆ.

    ಗಾಯಾಳು ಯುವಕ ಆಕಾಶ್​ ಚಾಂಡೆಲ್​​ ಪ್ರತಿಕ್ರಿಯಿಸಿ, ತಾನು ಧನಬಾದ್​ನ ಕೋಯ್ಲಾ ನಗರದಲ್ಲಿರುವ ಮಾಲ್​ ಒಂದರ ಮುಂಭಾಗ ನನ್ನ ಸ್ನೇಹಿತರ ಜೊತೆ ನಿಂತಿದೆ. ಈ ವೇಳೆ 6-7 ಕಾರುಗಳಲ್ಲಿ ರಣವೀರ್​ ಸಿಂಗ್​ ಹಾಗೂ ಆತನ ಸಹಚರರು ತೆರಳುತ್ತಿದ್ದರು. ಈ ವೇಳೆ ರಸ್ತೆಬದಿ ನಿಂತಿದ್ದ ನನ್ನನ್ನು ಕಂಡು ನೀನು ಯಾಕೆ ನಮಸ್ಕಾರ ಮಾಡಲಿಲ್ಲ ಎಂದು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಹಲ್ಲೆ ನಡೆಸಲು ಶುರು ಮಾಡಿದ್ದರು.

    ಇದನ್ನೂ ಓದಿ: ದೂರು ದಾಖಲಿಸಿದವನ ಮೇಲೆ 14 ಜನ ದಾಳಿ ಮಾಡಿ ಕೊಂದರು

    ನಾನು ಯಾವ ಕಾರಣಕ್ಕೆ ಹೊಡೆಯುತ್ತಿದ್ದೀರಾ ಎಂದು ಕೇಳಿದಾಗ ಅವರ ನನ್ನನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಹತ್ತಿರದಲ್ಲಿದ್ದ ಟೀ ಶಾಪ್​ ಮುಂಭಾಗ ಹಲ್ಲೆ ನಡೆಸಿದ್ದರು. ಯಾಕೆ ಹೊಡೆಯುತ್ತಿದ್ದೀರ ಎಂದು ಪುನಃ ಕೇಳಿದಾಗ ಸುಮ್ಮನೇ ಎಂದು ಹೇಳಿ ಬಲವಂತವಾಗಿ ಅವರ ಕಾಲಿಗೆ ಬೀಳುವಂತೆ ಮಾಡಿದ್ಧಾರೆ. ಬಳಿಕ ಮೊಬೈಲ್​ ಪೋನಿನಿಂದ ನನ್ನ ತಂದೆಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಯುವಕ ಆಕಾಶ್​ ಆರೋಪಿಸಿದ್ದಾನೆ.

    ದೊಡ್ಡ ಷಡ್ಯಂತ್ರವಿದೆ

    ವೈರಲ್​ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ರಣವಿಜಯ್​ ಸಿಂಗ್​ ನಮ್ಮ ರಾಜಕೀಯ ಬೆಳವಣಿಗೆ ಸಹಿಸಲಾರದೆ ಯಾರೋ ಕಿಡಿಗೇಡಿಗಳು ಮಾಡಿರುವ ದುಷ್ಕೃತ್ಯ ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ವಿಡಿಯೋದಲ್ಲಿ ಹಲ್ಲೆ ನಡೆಸುತ್ತಿರುವವನು ನನ್ನ ಮಗ ಎಂದು ಹೇಗೆ ಹೇಳಲು ಸಾಧ್ಯ. ಈ ವಿಡಿಯೋವನ್ನು ಫೋರೆನ್ಸಿಕ್ ವಿಜ್ಞಾನಿಗಳಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

    ಮೊದಲಿಗೆ ನಾನು ಈ ವಿಡಿಯೊದ ಸತ್ಯಾಸತ್ಯತೆಯನ್ನು ಪ್ರಶ್ನಿಸಲು ಇಷ್ಟಪಡುತ್ತೇನೆ. ವಿಡಿಯೋದಲ್ಲಿ ಇರುವವನು ನಿಮ್ಮ ಮಗ ಎಂದು ಹೇಳಲಾಗಿದೆ. ಆದರೆ, ಯಾವ ಕೋನದಿಂದಲೂ ನೋಡಿದರು ಸಹ ಆತ ನನ್ನ ಮಗ ಎಂದು ಹೇಳಲು ಸಾಧ್ಯವಿಲ್ಲ. ಈ ಸಂಬಂಧ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಕಾಂಗ್ರೆಸ್​ ನಾಯಕ ರಣವಿಜಯ್​ ಸಿಂಗ್​ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts