ವಿಜಯವಾಣಿ ಸುದ್ದಿಜಾಲ ಗದಗ
ಯುವ ಶಕ್ತಿ ಈ ದೇಶದ ಶಕ್ತಿ. ಅವರಿಗೆ ಸೂಕ್ತ ಸೌಲಭ್ಯಗಳು ಹಾಗೂ ಅನುಕೂಲಕರ ಯೋಜನೆಗಳನ್ನು ನೀಡಿ ಅವರನ್ನು ಮೇಲೆತ್ತಬೇಕು. ಈ ಕಾರಣದಿಂದಾಗಿಯೇ ಕಾಂಗ್ರೆಸ್ ಸರ್ಕಾರ ಯುವನ್ಯಾಯ ಗ್ಯಾರಂಟಿಯನ್ನು ಘೋಷಿಸಿದೆ ಎಂದು ಕಾಂಗ್ರೆಸ್ ಅಭ್ಯಥಿರ್ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜರುಗಿದ ಕಾಂಗ್ರೆಸ್ಸಿನಿಂದ ಜರುಗಿದ ಯುವ ಚೈತನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವನ್ಯಾಯ ಗ್ಯಾರಂಟಿ ಇದು ದೇಶದ ಯುವ ಜನತೆಯ ಪಾಲಿಗೆ ಕ್ರಾಂತಿಕಾರಕವಾಗಲಿದೆ. ದೇಶದ ಜನರು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ನಿಮ್ಮ ಸೇವೆ ಮಾಡಿಕೊಡಲು ಅನುಕೂಲ ಮಾಡಿಕೊಡಬೇಕು ಎಂದರು.
ಬಿಜೆಪಿ ವಿರುದ್ಧ ಹರಿಹಾಯ್ದ ಗಡ್ಡದೇವರಮಠ, ಹತ್ತು ವರ್ಷಗಳ ಹಿಂದೆಯೇ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿಸುವ ಬದಲಾಗಿ ಉದ್ಯೋಗಗಳನ್ನು ಯುವಜನರಿಂದ ಕಸಿದುಕೊಂಡಿದ್ದಾರೆ. ಉದ್ಯೋಗ ಕೇಳಿದ ಯುವಕರಿಗೆ ಚಹಾ ಮಾರಲು, ವಡಾ ಮಾರಲು ಪ್ರಧಾನಿ ಸಲಹೆ ನೀಡುತ್ತಾರೆ ಎಂದು ಟೀಕಿಸಿದರು.
ಎಚ್. ಕೆ. ಪಾಟೀಲ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಲ್ಲಿ ನಿರುದ್ಯೋಗಿ ಯುವಕರಿಗೆ ಸ್ಟೆಂಡ್ ನೀಡಲಾಗುತ್ತಿದ್ದು, ನೌಕರಿಗೆ ಅಜಿರ್ ಹಾಕಲು ಸೇರಿದಂತೆ ತಮ್ಮ ಖಚಿರ್ಗೆ, ಮನೆ ಖಚಿರ್ಗೆ ಸಹಾಯವಾಗಿದೆ. ಯುವಜನರ ಆತ್ಮವಿಶ್ವಾಸ ಹೆಚ್ಚಿಸಿದೆ. ಉಳಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳು ಸಂಕಷ್ಟದ ಕಾಲದಲ್ಲಿ ಜನರಿಗೆ ಆಸರೆಯಾಗಿವೆ. ಇದೇ ಮಾದರಿಯಲ್ಲಿ ಕೇಂದ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಪಂಚನ್ಯಾಯ ಗ್ಯಾರಂಟಿ ಯೋಜನೆಗಳು ಜಾರಿಗೆ ಬರಲಿವೆ. ಇದು ದೇಶದ ಸಾಮಾನ್ಯ ಜನರ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಭ್ಯಥಿರ್ ಆನಂದಸ್ವಾಮಿ ಗಡ್ಡದೇವರಮಠರಿಗೆ ಮತ ನೀಡುವ ಮೂಲಕ ಸಾಮಾಜಿಕ ನ್ಯಾಯ, ಸಮಸಮಾಜದ ನಿರ್ಮಾಣ, ಬಡವರ ಕಲ್ಯಾಣ, ಸಂವಿಧಾನ ರಕ್ಷಣೆಗೆ ಬೆಂಬಲಿಸಿ ಎಂದು ಕರೆ ನೀಡಿದರು.
ಸಮಾವೇಶದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಜಿ.ಎಸ್.ಪಾಟೀಲ, ಡಿ.ಆರ್.ಪಾಟೀಲ, ಜಿ. ಎಸ್. ಗಡ್ಡದೇವರಮಠ, ಬಿ.ಬಿ. ಶ್ರೀನಿವಾಸ, ಮಹಮ್ಮದ್ ನಲಪಾಡ್, ಬಿ.ಬಿ.ಅಸೂಟಿ, ಸಿದ್ದು ಪಾಟೀಲ, ಕೃಷ್ಣಗೌಡ ಪಾಟೀಲ, ಸಚಿನ್ ಪಾಟೀಲ, ಅಶೋಕ ಮಂದಾಲಿ, ವಿವೇಕ ಯಾವಗಲ್ಲ ಸೇರಿದಂತೆ ಹಲವರು ಇದ್ದರು.
ಎಪಿಎಂಸಿ ಯಾರ್ಡ್ ನಲ್ಲಿ ಪ್ರಚಾರ:
ಗದಗ ನಗರದ ಎಪಿಎಂಸಿ ಯಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯಥಿರ್ ಆನಂದಸ್ವಾಮಿ ಗಡ್ಡದೇವರಮಠ, ಸಮಾಜದ ಎಲ್ಲ ವರ್ಗಗಳನ್ನು ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಬಲ್ಲ ನಾಯಕತ್ವ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ. ಬಿಜೆಪಿಯವರ ಮಾತಿಗೆ ಮರುಳಾಗಿ ದೇಶವನ್ನು ಮತ್ತೊಮ್ಮೆ ಅವರ ಕೈಗೆ ಕೊಟ್ಟರೆ ಸಮಾಜಗಳ ನಡುವೆ ಕಂದಕಗಳನ್ನು ಸೃಷ್ಟಿ ಮಾಡಿ ಶಾಂತಿಯನ್ನು ಕದಡುತ್ತಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ನನಗೆ ನಿಮ್ಮ ಮತವನ್ನು ನೀಡಬೇಕು ಎಂದು ಆನಂದಸ್ವಾಮಿ ಗಡ್ಡದೇವರಮಠ ಮನವಿ ಮಾಡಿದರು.
ಬಹುರಾಷ್ಟ್ರೀಯ ಹಾಗೂ ಶ್ರೀಮಂತ ಕಾಪೋರ್ರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸಿದ ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳಿಂದಾಗಿ ದೇಶದಲ್ಲಿ ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರು ಪರಿತಪಿಸುತ್ತಿದ್ದಾರೆ. ವ್ಯಾಪಾರಸ್ಥರಿಂದ ವಸೂಲಿ ಮಾಡಿದ ಜಿಎಸ್ಟಿ ಹಣದಲ್ಲಿ ರಾಜ್ಯಕ್ಕೆ ಬರಬೇಕಿದ್ದ, ರಾಜ್ಯದ ಅಭಿವೃದ್ಧಿಗೆ ಕಾರಣವಾಗಬೇಕಿದ್ದ ರಾಜ್ಯದ ಪಾಲಿನ ತೆರಿಗೆ ಹಣ ನೀಡದೇ ಪರೋಕ್ಷವಾಗಿ ಕರ್ನಾಟಕದ ಜನರ ಸಂಕಷ್ಟಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ 10 ವರ್ಷಗಳ ದುರಾಡಳಿತ ಕೊನೆಗೊಳಿಸಿ ಜನಪರ ಕಾಂಗ್ರೆಸ್ ಸರ್ಕಾರ ಸ್ಥಾಪಿಸುವ ಕಾಲ ಬಂದಿದೆ. ದಯವಿಟ್ಟು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು. ಸಚಿವ ಎಚ್. ಕೆ. ಪಾಟೀಲ, ನಾಗೇಶ ಸವಡಿ, ಜಿ. ಎಸ್. ಗಡ್ಡದೇವರಮಠ, ಮಹೇಂದ್ರ ಸಿಂಘಿ, ರೇವಣಪ್ಪ ಯಳಮಲಿ, ಉಮೇಶ ಹುಬ್ಬಳ್ಳಿ, ಶಶಿಕಲಾ ಅಕ್ಕಿ, ಲಲಿತಾ ಅಸೂಟಿ, ಲಲಿತಕ್ಕ ಇಂಗಳಳ್ಳಿ ಇತರರು ಇದ್ದರು.