More

    ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಯತ್ನ

    ಶಿವಮೊಗ್ಗ: ದಿನ ಬೆಳಗಾದರೆ ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಎಂಎಲ್ಸಿ ಎಸ್.ಎಲ್.ಭೋಜೇಗೌಡ ದೂರಿದರು.

    ನಗರದಲ್ಲಿ ಸೋಮವಾರ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಜನಾಭಿಪ್ರಾಯಕ್ಕೆ ತಲೆಬಾಗಬೇಕಿದ್ದು 135 ಸ್ಥಾನಗಳನ್ನು ಜನತೆ ಕೊಟ್ಟಿದ್ದಾರೆ. ಇನ್ನೂ ಶಾಸಕರ ಖರೀದಿ ಏಕೆ ?, ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು.
    ಜೆಡಿಎಸ್ ಹರಿದು ಹಂಚಿ ಹೋಗಿದ್ದು ಮುಖಂಡರು ಪಕ್ಷ ಬಿಟ್ಟಿದ್ದಾರೆಂದು ಹೇಳುತ್ತಿದ್ದಾರೆ. ಆದರೆ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಕಟ್ಟಿದ ಪಕ್ಷ ಸಧೃಡವಾಗಿದ್ದು ಹೆಮ್ಮರವಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಕಟ್ಟಿ ತೋರಿಸಬೇಕಿದೆ. ರೈತರು, ಹಿಂದುಳಿದವರ ಪರವಾಗಿ ಎಚ್‌ಡಿಡಿ, ಎಚ್‌ಡಿಕೆ ಕೆಲಸ ಮಾಡಿದ್ದಾರೆ. ಸಾಮರಸ್ಯದ ಬದುಕು ಎಲ್ಲರಿಗೂ ಬೇಕಿದೆ. ಅದು ಕುಮಾರಣ್ಣ ಅವರಿಂದ ಮಾತ್ರ ಸಾಧ್ಯವಿದೆ. ಜನರ ತೀರ್ಪು ಒಪ್ಪಿದ್ದೇವೆ. ಕಾಂಗ್ರೆಸ್‌ನವರು ಜನರು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಕುಮಾರಣ್ಣ ವಿರುದ್ಧ ಹಗೆತನ ಸಾಧಿಸುವುದನ್ನು ಬಿಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts