More

    ಅಭಿವೃದ್ಧಿಗಾಗಿ ಕಾಂಗ್ರೆಸ್​ ಬಲಪಡಿಸಿ: ಆನಂದ ಗಡ್ಡದೇವರಮಠ

    ವಿಜಯವಾಣಿ ಸುದ್ದಿಜಾಲ ಗದಗ
    ದೇಶ ಅಭಿವೃದ್ದಿ ಹೊಂದಲು ಹಾಗೂ ಹಾವೇರಿ- ಗದಗ ಕ್ಷೇತ್ರ ಅಭಿವೃದ್ದಿ ಪಡಿಸಲು ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿ ಕೈ ಬಲಪಡಿಸಿ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯಥಿರ್ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
    ಜಿಲ್ಲೆಯ ರೋಣ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿವಾರ ಬೃಹತ ರೋಡ್​- ಶೋ ನಡೆಸಿ ಮಾತನಾಡಿದ ಅವರು, ಜನರು ತೋರಿಸುತ್ತಿರುವ ಬೆಂಬಲ ಹಾಗೂ ಪ್ರೀತಿಗೆ ನಾನು ಯಾವಾಗಲು ಅಭಾರಿಯಾಗಿದ್ದೇನೆ. ನಿಮ್ಮ ಬೆಂಬಲ ನೋಡಿದರೆ ಈ ಚುನಾವಣೆಯಲ್ಲಿ ನಾನು ಗೆಲ್ಲುವ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಜನರು ಬೇಸತ್ತಿದ್ದಾರೆ. ಜನರು ಬದಲಾವಣೆ ಬಯಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಜನರೆ ಉತ್ತರ ನೀಡುತ್ತಾರೆ. ಅವರ ಸುಳ್ಳುಗಾರಿಕೆಗೆ ಜನರು ಈ ಬಾರಿ ಮರುಳಾಗದೆ ಸರ್ವಜನಾಂಗ ಪಕ್ಷವಾದ ಕಾಂಗ್ರೆಸ ಪಕ್ಷಕ್ಕೆ ಬೆಂಬಲ ನೀಡಬೇಕು. ಇದರಿಂದ ನಮ್ಮ ಆತ್ಮಸೆರ್ಯ ಹೆಚ್ಚಿಸಿದೆ. ಅದರಂತೆ ನಮ್ಮ ರಾಜ್ಯ ಸರ್ಕಅರ ನೀಡಿದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡ ಜನರು ನೆಮ್ಮದಿ ಜೀವನ ನಡೆಸುವಂತಾಗಿದೆ. ಈ ಯೋಜನೆಗಳನ್ನು ಜನರು ಮೆಚ್ಚುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಈಗಾಗಲೆ ಸೋಲಿನ ಬೀತಿ ಕಾಡುತ್ತಿದೆ. ಆದರಿಂದ ನಮ್ಮ ಯೋಜನೆಗಳ ಬಗ್ಗೆ ಟೀಕೆಗಳನ್ನು ನಡೆಸುತ್ತಿದ್ದಾರೆ ಎಂದರು.
    ಶಾಸಕ ಜಿ. ಎಸ್​. ಪಾಟೀಲ ಮಾತನಾಡಿ, ಕಾಂಗ್ರೆಸ್​ ಪಕ್ಷ ಉತ್ತಮ ಜನಹಿತ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇದರಿಂದ ಬಿಜೆಪಿ ನಲಗುತ್ತಿದೆ. ಬಿಜೆಪಿ ಪಕ್ಷಕ್ಕೆ ಜನರು 10 ವರ್ಷ ಅಧಿಕಾರ ಕೊಟ್ಟು ನೋಡಿದ್ದಾರೆ. ಅವರಿಂದ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಆದ್ದರಿಂದ ಜನರು ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಬರಬೇಕು. ಅಂದಾಗ ಮಾತ್ರ ಬಡವರು ಬದುಕಲು ಸಾಧ್ಯ.ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಬಡಜನರ ಜೀವನ ಸುಧಾರಣೆ ಆಗುಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ನಮ್ಮ ಪಕ್ಷಕ್ಕೆ ಆಶಿರ್ವದಿಸಬೇಕು. ವಿಧಾನಸಭೆಯಲ್ಲಿ ನಮಗೆ ಬೆಂಬಲ ನೀಡಿದಂತೆ ಲೋಕಸಭೆಯಲ್ಲಿ ನಮ್ಮ ಅಭ್ಯಥಿರ್ ಆನಂದ ಗಡ್ಡದೇವರಮಠ ಅವರಿಗೆ ಬೆಂಬಲ ನೀಡಿ ಅವರನ್ನು ಈ ಬಾರಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಹೇಳಿದರು.
    ಐ.ಎಸ್​.ಪಾಟೀಲ, ಮಿಥುನ ಪಾಟೀಲ, ಅಕ್ಷಯ. ಪಾಟೀಲ, ಪ್ರಭು ಮೇಟಿ, ಎಸ್​. ಎಚ್​. ಸೊಂಪೂರ, ಬಸವರಾಜ ನವಲಗುಂದ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts