ವಿಜಯನಗರ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಂಡಕ್ಟರ್, ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹೊಸಪೇಟೆ ವಿಭಾಗದ ಕಂಡಕ್ಟರ್ ಕುತುಬುದ್ದೀನ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಕಂಡಕ್ಟರ್.
ಲಗೇಜ್ ವಿಚಾರವಾಗಿ ಕಾರ್ಗೊ ಗುತ್ತಿಗೆದಾರ ಹಾಗೂ ಕಂಡಕ್ಟರ್ ಕುತುಬುದ್ದೀನ್ ನಡುವೆ ಜಗಳ ನಡೆದಿದೆ. ಬಳ್ಳಾರಿಯಿಂದ ಪಾರ್ಸೆಲ್ ತರುವ ವಿಷಯವಾಗಿ ಬಳ್ಳಾರಿಯ ಕಾರ್ಗೊ ಉದ್ಯೋಗಿ ಮತ್ತು ಕಂಡಕ್ಟರ್ ಮಧ್ಯೆ ವಾಗ್ವಾದ ನಡೆದಿದೆ. ಈ ಜಗಳದ ಆಡಿಯೋವನ್ನು ಕಾರ್ಗೊ ಉದ್ಯೋಗಿಗಳು ಹೊಸಪೇಟೆ ಡಿಟಿಒ ಅಧಿಕಾರಿಗೆ ಕಳುಹಿಸಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸುಮಾರು 5,500 ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಕೊಟ್ಟರು ಮೋದಿ: ಸ್ನಾತಕ-ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಮೀಸಲಾತಿ
ಈ ಸಂಬಂಧವಾಗಿ ಅಧಿಕಾರಿಗಳು ಕುತುಬುದ್ದೀನ್ ಅವರನ್ನು ಕರೆಸಿ ವಿಚಾರಣೆ ನಡೆಸಿದಾಗ ಅವರು ಕೂಡಲೇ ಕಿಸೆಯಿಂದ ಫಿನೈಲ್ ಬಾಟಲಿ ತೆಗೆದು ಕುಡಿದು ಅಲ್ಲಿಂದ ಓಡಿಹೋಗಿದ್ದಾರೆ. ನಂತರ ಸಿಬ್ಬಂದಿ ಅವರನ್ನು ಹಿಡಿದು ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಪುಟ ರಚನೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದ ಬಿಎಸ್ವೈ ವಲಸಿಗರ ಬಗ್ಗೆ ಹೇಳಿದ್ದೇನು?
‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…
ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್