More

    ಎಣ್ಣೆ ಹೊಡೆಯೋ ಚಟ ಬಿಡಲಾಗದೆ ಜಿಲ್ಲೆಯಲ್ಲಿ ಮೂವರು ಆತ್ಮಹತ್ಯೆ

    ಹಾವೇರಿ: ಮದ್ಯ ಚಟಕ್ಕೆ ಅಂಟಿಕೊಂಡ ಮೂವರಲ್ಲಿ ಓರ್ವ ಕೆರೆ, ಮತ್ತೊರ್ವ ಬಾವಿಗೆ ಹಾರಿ ಹಾಗೂ ಇನ್ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರತ್ಯೇಕ ಮೂರು ಘಟನೆ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
    ಸವಣೂರ ತಾಲೂಕಿನ ಕೃಷ್ಣಾಪುರ ಗ್ರಾಮದ ಹರೀಶ ಚಂದ್ರಪ್ಪ ಅಳಲಗೇರಿ (29), ಶಿಗ್ಗಾಂವಿ ತಾಲೂಕಿನ ಬಂಕಾಪುರದ ಖಾದರಗೌಸ ಮಹ್ಮದ್ ನಾಶಿಪುಡಿ (38) ಹಾಗೂ ಹಾನಗಲ್ಲ ಪಟ್ಟಣದ ಕಮಾಟಗೇರಿ ಓಣಿಯ ದೇವಿಂದ್ರ ಈರಪ್ಪ ಬೇವಿನಮರದ (45) ಎಂಬುವನು ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡವರು.
    ಹರೀಶ ವಿಪರೀತ ಮದ್ಯದ ಚಟಕ್ಕೆ ಅಂಟಿಕೊಂಡಿದ್ದರಿಂದ ಮದ್ಯ ಸೇವಿಸಿದ ಅಮಲಿನಲ್ಲಿ ಜಮೀನುವೊಂದರಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಖಾದರಗೌಸ ಮದ್ಯ ಸೇವಿಸಿದ ಅಮಲಿನಲ್ಲಿ ಬಂಕಾಪುರದ ಅಯ್ಯನ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ದೇವಿಂದ್ರ ಮದ್ಯದ ಚಟ ಬಿಡಲಾಗದೆ ಮಾನಸಿಕ ಮಾಡಿಕೊಂಡು ಪಕ್ಕದ ಮನೆಯ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಆಯಾ ತಾಲೂಕಿನ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts