More

    ಹೀರೋ ಆಗುವ ಕನಸು ಕಂಡಿದ್ದ ಯುವಕನಿಗೆ ಶಾಕ್​ ಕೊಟ್ಟ ನಿರ್ದೇಶಕಿ! ಅಶ್ಲೀಲ ಚಿತ್ರದ ಸುಳಿಗೆ ಸಿಲುಕಿ ಪರದಾಟ

    ತಿರುವನಂತಪುರಂ: ಹೀರೋ ಮಾಡುವುದಾಗಿ ನಂಬಿಸಿ ಅಶ್ಲೀಲ ವೆಬ್​ ಸರಣಿಗೆ ಬಳಸಿಕೊಂಡರು ಎಂದು ಆರೋಪಿಸಿ ಯುವಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಮಲಯಾಳಂ ನಿರ್ದೇಶಕಿ ಲಕ್ಷ್ಮೀ ದೀಪ್ತಾರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ತಿರುವನಂತಪುರಂ ಮೂಲದ ಯುವಕ ನೀಡಿದ ದೂರಿನ ಆಧಾರದ ಮೇಲೆ ಅರುವಿಕ್ಕರ ಪೊಲೀಸರು ಲಕ್ಷ್ಮೀ ದೀಪ್ತಾರನ್ನು ಬಂಧಿಸಿದ್ದಾರೆ. ಬಳಿಕ ನೆಡುಮಂಗಡ್​ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಸದ್ಯ ಆಕೆ ಜಾಮೀನಿನ ಮೇಲೆ ಹೊರಬಂದಿದ್ದಾರೆ.

    ವೆಂಗನೂರ್​ ಮೂಲದ ಯುವಕನಿಂದ ದೂರು ದಾಖಲಾಗಿದೆ. ವೆಬ್​ ಸರಣಿಯಲ್ಲಿ ನಾಯಕನ ಪಾತ್ರ ನೀಡುವುದಾಗಿ ಭರವಸೆ ನೀಡಿದರು. ನಂಬಿಕೆ ಬರುವಂತೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದರು. ಬಳಿಕ ನನ್ನನ್ನು ಒಪ್ಪಂದದಲ್ಲಿ ಸಿಲುಕಿಸಿ, ಬಲವಂತವಾಗಿ ಅಶ್ಲೀಲ ವೆಬ್​ ಸರಣಿಯಲ್ಲಿ ನಟಿಸುವಂತೆ ಮಾಡಿದರು. ಕಳೆದ ವರ್ಷ ಜೂನ್​ 5 ಮತ್ತು 7ರಂದು ಅರುವಿಕ್ಕರದ ಖಾಲಿ ಫ್ಲ್ಯಾಟ್​ನಲ್ಲಿ ಶೂಟಿಂಗ್​ ನಡೆಯಿತು. ವೆಬ್​ ಸರಣಿಯಿಂದ ಹೊರ ಬರುವ ಪ್ರಯತ್ನ ಮಾಡಿದರೆ ಒಪ್ಪಂದದ ಪತ್ರ ತೋರಿಸಿ ಬೆದರಿಸುತ್ತಿದ್ದರು ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

    ಇದನ್ನೂ ಓದಿ: ಸಾಕುನಾಯಿ ಕಾಪಾಡಲು ಹೋಗಿ ದುರಂತ ಅಂತ್ಯ ಕಂಡ ಮಹಿಳೆ! ಭಯಾನಕ ವಿಡಿಯೋ ವೈರಲ್​

    ವೆಬ್​ ಸರಣಿಯ ಟ್ರೈಲರ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆದ ಬಳಿಕ ತಿರುವನಂತಪುರಂನ ವಿಝಿಂಜಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದಾಗ ಯುವಕ ಹೈಕೋರ್ಟ್​ ಮೆಟ್ಟಿಲೇರಿದನು. ಆದರೆ, ಲಕ್ಷ್ಮೀ ಹೈಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆರೋಪಿಯನ್ನು ಪೊಲೀಸರ ಮುಂದೆ ಹಾಜರುಪಡಿಸಿದರೆ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಲಕ್ಷ್ಮಿಗೆ ಜಾಮೀನು ಮಂಜೂರಾಗಿದೆ. (ಏಜೆನ್ಸೀಸ್​)

    ಸಲಿಂಗ ಕಾಮದ ಅನುಭವವಿದೆಯೇ? ನೆಟ್ಟಿಗನ ಪ್ರಶ್ನೆಗೆ ಅನಸೂಯ ಕೊಟ್ಟ ಬೋಲ್ಡ್​ ಉತ್ತರ ವೈರಲ್​

    ಉತ್ತರ ಕನ್ನಡದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ವಶಕ್ಕೆ, ಇನ್ನಿಬ್ಬರಿಗೆ ತೀವ್ರ ಶೋಧ

    ಸಾಕುನಾಯಿ ಕಾಪಾಡಲು ಹೋಗಿ ದುರಂತ ಅಂತ್ಯ ಕಂಡ ಮಹಿಳೆ! ಭಯಾನಕ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts