More

    ತಿದ್ದಿಕೊಳ್ಳದಿದ್ದರೆ ನಿಮ್ಮ ಅಂತಿಮಯಾತ್ರೆ ಶುರು; ಸಿಎಂ ಯೋಗಿ ಎಚ್ಚರಿಕೆ ಕೊಟ್ಟಿದ್ದಾದರೂ ಯಾರಿಗೆ?

    ಉತ್ತರಪ್ರದೇಶ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ, ಕಟ್ಟರ್ ಹಿಂದುತ್ವದ ಕುರಿತ ಹೇಳಿಕೆಗಳ ಮೂಲಕ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ. ಅಂಥದ್ದೇ ಮತ್ತೊಂದು ಹೇಳಿಕೆಯನ್ನು ಅವರು ನೀಡಿದ್ದು ಇದೀಗ ಭಾರಿ ಸದ್ದು ಮಾಡುತ್ತಿದೆ.

    ಈ ಸಲ ಅವರು ಅಂತಿಮಯಾತ್ರೆ ಮಟ್ಟದಲ್ಲಿ ಮಾತನಾಡಿದ್ದು, ತಪ್ಪಿತಸ್ಥರು ಸುಧಾರಣೆ ಆಗದಿದ್ದರೆ ಅವರಿಗೆ ಚಟ್ಟ ಕಟ್ಟುವುದು ಖಚಿತ ಎಂಬರ್ಥದಲ್ಲಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅಷ್ಟಕ್ಕೂ ಯೋಗಿ ಆದಿತ್ಯನಾಥ್​ ಈ ಥರ ಕಟುವಾಗಿ ಮಾತನಾಡಿದ್ದು ಯಾರ ವಿರುದ್ಧ ಎಂಬ ಕುತೂಹಲ ಸಹಜ. ಅದಕ್ಕೆ ಉತ್ತರ ಇಲ್ಲಿದೆ.

    ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಅವರು ಲವ್ ಜಿಹಾದ್ ವಿರುದ್ಧ ಗುಡುಗಿದ್ದಾರೆ. ಮದುವೆ ಆಗಲು ಮತಾಂತರ ಆಗಬೇಕಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್​ ಹೇಳಿದೆ. ಅದಾಗ್ಯೂ ಗುರುತು ಮರೆಮಾಚಿ ಹಿಂದೂ ಸೋದರಿಯರ ಜೀವನದ ಜತೆ ಚೆಲ್ಲಾಟ ಆಡಲಾಗುತ್ತಿದೆ. ಹೀಗಾಗಿ ಲವ್ ಜಿಹಾದ್ ವಿರುದ್ಧ ಸರ್ಕಾರ ಕಠಿಣವಾದ ಕಾನೂನೊಂದನ್ನು ಮಾಡಲಿದೆ. ಲವ್ ಜಿಹಾದ್​ ನಡೆಸುವವರು ತಿದ್ದಿಕೊಳ್ಳದಿದ್ದರೆ ಅವರ ರಾಮ್​ ನಾಮ್ ಸತ್ಯ ಯಾತ್ರೆ (ಅಂತಿಮಯಾತ್ರೆ) ಶುರುವಾಗುತ್ತದೆ ಎಂದು ಸಿಎಂ ಯೋಗಿ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts