ಬೆಂಗಳೂರು: ಲಾಕ್ಡೌನ್ ನಂತರ ಕುಸಿದಿರುವ ರಾಷ್ಟ್ರದ ಆರ್ಥಿಕ ಚೇತರಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ನೀಡಿರುವ 20 ಲಕ್ಷ ಕೋಟಿ ಆರ್ಥಿಕ ನೆರವು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಘೋಷಣೆಯಂತೆ ವಿತ್ತ ಸಚಿವರು ಇಂದು ಯಾರಿಗೆ ನೆರವು ನೀಡಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳಿಗೆ 3 ಲಕ್ಷ ಕೋಟಿ ರೂಪಾಯಿ ನೆರವು ನೀಡಿದ್ದಾರೆ.
ಇದನ್ನೂ ಓದಿ ಕೆ.ಎನ್.ರಾಜಣ್ಣ, ನಾನೂ ಕೂಡಿಕೊಂಡು ಮೈತ್ರಿ ಸರ್ಕಾರ ಪಥನ ಮಾಡಿದೆವು
ಈ ಮೊತ್ತ ಉದ್ಯಮಿಗಳಿಗೆ ಮಾತ್ರ ಸಹಕಾರಿಯಾಗದೆ ಕಾರ್ಮಿಕ ವರ್ಗಕ್ಕೂ ಅನುಕೂಲವಾಗಿದೆ. ಕಾರ್ಮಿಕ ವರ್ಗದ ಆರ್ಥಿಕ ಮಟ್ಟ ಹೆಚ್ಚಲಿದೆ. ಎಂಎಸ್ಎಂಇಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ನೀಡುವ ಯೋಜನೆ ಘೋಷಣೆ ತಕ್ಷಣ ಕೈಗಾರಿಕೆ ಗಳನ್ನು ಮತ್ತೆ ಅರಂಭಿಸಲು ಉತ್ತೇಜನಕಾರಿಯಾಗಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್-19ರಿಂದ ತತ್ತರಿಸಿದ ಜಗತ್ತಿನ ಯಾವ ರಾಷ್ಟ್ರಗಳು ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವು ಘೋಷಣೆ ಮಾಡಿಲ್ಲ. ಆದರೆ ನಮ್ಮ ಪ್ರಧಾನಿಗಳು ಕೈಗಾರಿಕೆಗಳ ಚೇತರಿಕೆಗೆ ನೆರವು ನೀಡಿದ್ದಾರೆ. ಲಾಕ್ಡೌನ್ ವ್ಯವಸ್ಥೆಯಿಂದ ಜನರು ಹೊರ ಬಂದು ದುಡಿಮೆ ಆರಂಭಿಸುವ ಪ್ರೆರೇಪಿಸಿದ ಮೊದಲ ದಿಟ್ಟ ಹೆಜ್ಜೆಯಾಗಿದೆ ಎಂದು ಅವರು ಹೊಗಳಿದರು.