More

    ಉತ್ತರ ಕರ್ನಾಟಕದ ಬುಲ್ಡೋಜರ್ ಪ್ರಯೋಗಿಸುವ ಬಿಜೆಪಿ ಸಿಎಂ

    ಹುಬ್ಬಳ್ಳಿ : ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಪಾಕಿಸ್ತಾನಪರ ಒಲವು ಉಳ್ಳವರಿಗೆ ಪಾಠ ಕಲಿಸಲು ಬುಲ್ಡೋಜರ್ ಪ್ರಯೋಗಿಸುವ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.

    ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಚುನಾವಣೆ ಪ್ರಚಾರ ಬಹಿರಂಗ ಸಭೆ ಹಾಗೂ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.

    ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಸುವವರು, ಪಾಕ್ ಪರ ಘೋಷಣೆ ಕೂಗುವವರು, ಭಯೋತ್ಪಾದನೆ ಕೃತ್ಯ ಪ್ರೋತ್ಸಾಹಿಸುವವರನ್ನು, ಅಶಾಂತಿ ಹುಟ್ಟುಹಾಕುವವರನ್ನು ಎನ್​ಕೌಂಟರ್ ಮಾಡಬೇಕು. ಅಂತಹ ಸರ್ಕಾರ ಮುಂದಿನ ದಿನಗಳಲ್ಲಿ ಬರಲಿದೆ ಎಂದರು.

    ಕಾಂಗ್ರೆಸ್​ನವರು ಪ್ರಲ್ಹಾದ ಜೋಶಿ ಅವರನ್ನು ಲಿಂಗಾಯತ ವಿರೋಧಿ ಎಂದು ಆರೋಪಿಸಿದರು. ಆದರೆ, ಪ್ರಲ್ಹಾದ ಜೋಶಿ ಯಾವತ್ತಿಗೂ ಜಾತಿ ರಾಜಕಾರಣ ಮಾಡಿಲ್ಲ. ಅವರ ವಿರುದ್ಧ ಜಾತಿ ವಿರೋಧಿ ಆರೋಪ ಮಾಡಿದವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

    ಪ್ರಲ್ಹಾದ ಜೋಶಿ ಲಿಂಗಾಯತ ವಿರೋಧಿ ಎಂದಿದ್ದ ಸ್ವಾಮೀಜಿ ಒಬ್ಬರು ಚುನಾವಣೆ ಕಣದಿಂದ ಹಿಂದೆ ಸರಿದರು. ಒಬ್ಬರು ಸ್ವಾಮೀಜಿ ಜೋಶಿ ಅವರನ್ನು ಮಠಕ್ಕೆ ಕರೆದು, ಆಶೀರ್ವಾದ ಮಾಡಿದರು. ಮತ್ತೊಬ್ಬ ಸ್ವಾಮೀಜಿ ಕಾಂಗ್ರೆಸ್​ಗೆ ಸೇರ್ಪಡೆಯಾದರು ಎಂದು ಟೀಕಿಸಿದರು.

    ಜಾತಿ ರಾಜಕಾರಣ ಮಾಡಲು ಇದು ಗ್ರಾಮ, ತಾಲೂಕು ಅಥವಾ ಜಿಲ್ಲಾ ಪಂಚಾಯಿತಿ ಚುನಾವಣೆ ಅಲ್ಲ. ದೇಶದ ಭದ್ರತೆ, ಶಾಂತಿಯನ್ನು ಆಧರಿಸಿ ನಡೆಯುವ ಚುನಾವಣೆ ಇದು ಎಂದರು.

    ಕಾಂಗ್ರೆಸ್ ಸರ್ಕಾರ ಹಿಂದುಳಿದವರ ಮೀಸಲಾತಿ ಕಿತ್ತುಕೊಂಡು, ಮುಸ್ಲಿಂರಿಗೆ ಕೊಡಲು ಹೊರಟಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.

    ನಮಗೆ ಪಂಚಮಸಾಲಿ ಮೀಸಲಾತಿಗಿಂತ ದೇಶದ ಭದ್ರತೆ ಮುಖ್ಯ ಎಂದು ಹೇಳಿದರು.

    ಮತದಾನದ ದಿನದಂದು ಬೆಳಗ್ಗೆ 6 ಗಂಟೆಗೆ ಹಣೆಗೆ ತಿಲಕ ಇಟ್ಟುಕೊಂಡು, ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts