ಜೈಪುರ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವಿನ ವಿರೋಧ ಮುಂದುವರಿದಿದೆ.ಇಂದು ಸುದ್ದಿಗೋಷ್ಠಿ ನಡೆಸಿದ ಅಶೋಕ್ ಗೆಹ್ಲೋಟ್ ಅವರು, ಸಚಿನ್ ಪೈಲಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಚಿನ್ ಪೈಲಟ್ರನ್ನು ರಾಜಸ್ಥಾನದ ಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅವರಿಗೆ ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದ್ದರೂ ಬೆನ್ನಿಗೆ ಚೂರಿ ಹಾಕಿದರು. ಅವರೊಬ್ಬ ಯೂಸ್ಲೆಸ್ ಎಂದು ಅಶೋಕ್ ಗೆಹ್ಲೋಟ್ ಖಾರವಾಗಿ ಆರೋಪಿಸಿದ್ದಾರೆ.
ಸಚಿನ್ ಪೈಲಟ್ ಆಟವಾಡಿದ್ದಾರೆ. ಈ ಸರ್ಕಾರವನ್ನು ಕೆಡವಲು ಪಿತೂರಿ ನಡೆಯುತ್ತಿದೆ. ಅವರ ಮುಖದಲ್ಲಿ ಮುಗ್ಧತೆ ಕಾಣಬಹುದು..ಅವರು ಇಂಗ್ಲಿಷ್, ಹಿಂದಿ ಭಾಷೆಗಳನ್ನು ಚೆನ್ನಾಗಿ ಮಾತನಾಡಬಹುದು. ಮಾಧ್ಯಮದವರನ್ನೂ ಮರುಳು ಮಾಡಬಹುದು. ಆದರೆ ಈ ರಾಜ್ಯಕ್ಕೇನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೀನಾಕ್ಕೆ ನೇರ ಎಚ್ಚರಿಕೆ; ಭಾರತದೊಂದಿಗೆ ನೌಕಾಪಡೆ ಸಮರಾಭ್ಯಾಸಕ್ಕೆ ಬಂದ ಯುಎಸ್ಎಸ್ ನಿಮಿಟ್ಸ್
ಪಕ್ಷಕ್ಕಾಗಿ ನೀವೆಷ್ಟು ಕೆಲಸ ಮಾಡಿದಿರಿ? ಏನು ಮಾಡುತ್ತಿದ್ದೀರಿ ಎಂದು ಒಂದು ದಿನಕ್ಕೂ ನಾವ್ಯಾರೂ ಸಚಿನ್ ಅವರನ್ನು ಪ್ರಶ್ನಿಸಿರಲಿಲ್ಲ. ಕಳೆದ ಏಳುವರ್ಷಗಳಿಂದ ಸಚಿನ್ ಪೈಲಟ್ ಅವರು ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಒಂದು ದಿನವೂ ಕಿರಿಯರಾಗಲಿ, ಹಿರಿಯ ಮುಖಂಡರಾಗಲಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಎಂದು ಅಪಸ್ವರ ಎತ್ತಲಿಲ್ಲ. ಅವರಿಗೆ ಎಲ್ಲರೂ ಬೆಂಬಲ ನೀಡುತ್ತಲೇ ಬಂದಿದ್ದೆವು. ಆದರೂ ಪಕ್ಷವನ್ನು ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)
ರಾಮಮಂದಿರದ ಗರ್ಭಗುಡಿಯಲ್ಲಿ 40 ಕೆಜಿ ತೂಕದ ಬೆಳ್ಳಿಯ ಹಾಸುಗಲ್ಲು; ಆ.3ರಿಂದ ಧಾರ್ಮಿಕ ಕಾರ್ಯಕ್ರಮ