ನವದೆಹಲಿ: ಕೆಲ ವಿಶೇಷ ರೈಲುಗಳ ಸಂಚಾರ ಹೊರತುಪಡಿಸಿದರೆ, ಕಳೆದ ನಾಲ್ಕು ತಿಂಗಳಿನಿಂದ ರೈಲ್ವೆ ಸಂಚಾರ ಅಕ್ಷರಶಃ ಸ್ಥಗಿತವಾಗಿತ್ತು. ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೆಲ್ಲ ಇಲಾಖೆ ಹಂತಹಂತವಾಗಿ ಹಣ ಮರುಪಾವತಿಸಿತ್ತು.
ಸದ್ಯ, ಪ್ರಮುಖ ಮಾರ್ಗಗಳಲ್ಲಿ ವಿಶೇಷ ರೈಲಗಳಷ್ಟೇ ಸಂಚರಿಸುತ್ತಿವೆ. ಆದರೆ, ಬೇಡಿಕೆ ಮಾತ್ರ ಹೆಚ್ಚಾಗುತ್ತಲೇ ಇದೆ. ಅಂದರೆ, ವೇಟಿಂಗ್ ಲಿಸ್ಟ್ ಬೆಳೆಯುತ್ತಲೇ ಇದೆ. ಹೀಗಾಗಿ ರೈಲ್ವೆ ಇಲಾಖೆ ‘ತದ್ರೂಪಿ ರೈಲು’ಗಳ ಸಂಚಾರಕ್ಕೆ ನಿರ್ಧರಿಸಿದೆ. ಕೋವಿಡ್ ಸಂಕಷ್ಟದಿಂದಾಗಿ ತೀವ್ರವಾಗಿ ಆದಾಯ ಕುಸಿತ ಕಂಡಿರುವ ಇಲಾಖೆಗೂ ಇದರಿಂದ ನೆರವಾಗಲಿದೆ.
ಇದನ್ನೂ ಓದಿ; ವಾರಾಣಸಿ, ಮಥುರಾ ದೇಗುಲ ಜಾಗವನ್ನು ಮುಸ್ಲಿಮರು ಬಿಟ್ಟುಕೊಡಲಿ; ಹೋರಾಟಕ್ಕೂ ನಿರ್ಧಾರ
ಈಗಾಗಲೇ ನಿಗದಿಯಾಗಿರುವ ಮಾರ್ಗದಲ್ಲಿ ಸಂಚರಿಸುತ್ತಿರುವ ವಿಶೇಷ ರೈಲಿಗೂ ಮುನ್ನ ಅದೇ ಮಾರ್ಗದಲ್ಲಿ ಅದಕ್ಕೂ ಮುಂಚೆ ಸಂಚರಿಸುವ ರೈಲನ್ನು ತದ್ರೂಪಿ ರೈಲು ಎಂದು ಕರೆಯಲಾಗುತ್ತಿದೆ. ಆದರೆ, ಈ ರೈಲುಗಳ ಪ್ರಯಾಣ ಅವಧಿ ಹಾಗೂ ನಿಲುಗಡೆ ನಿಗದಿತ ರೈಲಿಗಿಂತ ಕಡಿಮೆಯಾಗಿರಲಿದೆ. ಮುಂದಿನ 15 ದಿನಗಳಲ್ಲಿ ಈ ರೈಲುಗಳ ಸಂಚಾರ ಆರಂಭವಾಗಲಿದೆ.
ವಿಶೇಷ ರೈಲುಗಳಲ್ಲಿ ಟಿಕೆಟ್ಗೆ ಇರುವ ಬೇಡಿಕೆಯನ್ನು ಗಮನಿಸುತ್ತಿದ್ದೇವೆ. ಯಾವುದಾದರೂ ಮಾರ್ಗದಲ್ಲಿ ಬೇಡಿಕೆ ಹೆಚ್ಚಿದ್ದು, 10 ದಿನಗಳಿಗಿಂತಲೂ ಅಧಿಕ ಕಾಲ ವೇಟಿಂಗ್ ಲಿಸ್ಟ್ನಲ್ಲಿ ಪ್ರಯಾಣಿಕರು ಕಾಯುತ್ತಿದ್ದರೆ, ಅಂಥ ಮಾರ್ಗದಲ್ಲಿ ತದ್ರೂಪಿ ರೈಲುಗಳನ್ನು ಓಡಿಸಲಾಗುತ್ತದೆ. ವೇಟಿಂಗ್ ಲಿಸ್ಟ್ನಲ್ಲಿರುವವರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ರೈಲ್ವೆ ಮಂಡಳಿ ಸಿಇಎ ವಿ.ಕೆ. ಯಾದವ್ ಮಾಹಿತಿ ನೀಡಿದ್ದಾರೆ.
ಇದೇ ವಾರ ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ