More

    ಚಂದ್ರಗುತ್ತಿ ದೇವಸ್ಥಾನದ ಮಳಿಗೆ ಹರಾಜು

    ಸೊರಬ: ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಸ್ಥಾನದ ರಥ ಬೀದಿಯಲ್ಲಿರುವ 22 ಮಳಿಗೆಗಳನ್ನು 11 ತಿಂಗಳ ಅವಧಿಗೆ ಗುರುವಾರ ಬಹಿರಂಗ ಹರಾಜು ನಡೆಸಲಾಯಿತು.

    ಈ ಬಾರಿ 22 ಮಳಿಗೆಗಳಿಂದ 22.21 ಲಕ್ಷ ರೂ. ಆದಾಯ ಸಂಗ್ರವಾಗಿದೆ. ಕಳೆದ ವರ್ಷ ಹರಾಜು ಮಾಡಿದಾಗ 21.61 ಲಕ್ಷ ರೂ. ಸಂಗ್ರಹವಾಗಿತ್ತು. ಧಾರ್ಮಿಕ ದತ್ತಿ ಇಲಾಖೆ ನಿಯಮಾನುಸಾರ ವ್ಯಾಪಾರ ವಹಿವಾಟು ನಡೆಸಬೇಕು. 7 ದಿನಗಳ ಒಳಗೆ ಹಣ ಪಾವತಿಸಬೇಕು. ಕಾನೂನು ಬಾಹಿರ ಚಟುವಟಿಕೆ ನಡೆಸುವಂತಿಲ್ಲ ಎಂದು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ವಿ.ಎಲ್.ಶಿವಪ್ರಸಾದ್ ತಿಳಿಸಿದರು.
    ಲಕ್ಷಾಂತರ ರೂ. ಪಾವತಿಸಿ ಮಳಿಗೆಗಳನ್ನು ಹರಾಜು ಹಿಡಿಯುತ್ತೇವೆ. ರಥಬೀದಿಯಲ್ಲಿ ಇತರರು ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಹರಾಜು ಹಿಡಿದವರಿಗೆ ನಷ್ಟವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಳಿಗೆ ಬಾಡಿಗೆದಾರರು ಒತ್ತಾಯಿಸಿದರು.
    ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಾಪ್ರಸಾದ್, ಸದಸ್ಯ ಎಂ.ಪಿ.ರತ್ನಾಕರ್, ದೇವಸ್ಥಾನದ ಸಿಬ್ಬಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts