More

    ಹುಡಾದಿಂದ ಅನಧಿಕೃತ ಲೇಔಟ್​ಗಳ ತೆರವು

    ಧಾರವಾಡ: ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಲಕಮನಹಳ್ಳಿ ಗ್ರಾಮದಲ್ಲಿ ಸುಮಾರು 10 ಎಕರೆಯಲ್ಲಿ ನಿರ್ವಿುಸಿದ್ದ ಮೂರು ಅನಧಿಕೃತ ಲೇಔಟ್​ಗಳನ್ನು ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಲಾಯಿತು.

    ಹೊಸಮನಿ ಮಹಮ್ಮದ್ ಉಮರಸಾಬ ಅವರ 2 ಎಕರೆ 3 ಗುಂಟೆ, ನಜೀರಅಹ್ಮದ ಮಹ್ಮದಅಲಿ ಮುಲ್ಲಾ, ಇತರರ 30 ಗುಂಟೆ, ಮೇನಕಾ ಆನಂದಕುಮಾರ ಎಚ್. ಅವರ 6 ಎಕರೆಯಲ್ಲಿ ಅನಧಿಕೃತ ಲೇಔಟ್​ಗಳನ್ನು ನಿರ್ವಿುಸಲಾಗಿತ್ತು. ಲೇಔಟ್​ಗಳಲ್ಲಿ ನಿರ್ವಿುಸಿದ್ದ ಚರಂಡಿ, ಪ್ಲಾಟ್ ಕಲ್ಲುಗಳನ್ನು ತೆರವುಗೊಳಿಸಲಾಯಿತು.

    ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, ವಾರದ ಹಿಂದೆ ಕಾರ್ಯುಚರಣೆ ನಡೆಸಿದ್ದರೂ ಮತ್ತೆ ಪ್ಲಾಟ್ ಕಲ್ಲುಗಳನ್ನು ನೆಟ್ಟಿದ್ದರು. ಅಂಥವರಿಗೆ ಪಾಠವಾಗಲೆಂಬ ಉದ್ದೇಶದಿಂದ ಪ್ರಾಧಿಕಾರದಿಂದ ಕಾರ್ಯುಚರಣೆ ಮುಂದುವರಿಸಲಾಗುವುದು ಎಂದರು.

    ಹುಡಾ ಸದಸ್ಯರಾದ ಚಂದ್ರಶೇಖರ ಗೋಕಾಕ, ಸುನೀಲ ಮೊರೆ, ಆಯುಕ್ತ ಎನ್.ಎಚ್. ಕುಮ್ಮಣ್ಣನವರ, ನಗರ ಯೋಜಕ ಸದಸ್ಯರಾದ ವಿವೇಕ ಕಾರೇಕರ, ಕಾರ್ಯನಿರ್ವಾಹಕ ಅಧಿಕಾರಿ ಎಂ. ರಾಜಶೇಖರ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕೊಕ್ಕಳಕಿ, ಉಮೇಶ ಬೇವೂರ, ಇಂಜಿನಿಯರ್​ಗಳಾದ ಬಸವರಾಜ ದೇವಗಿರಿ, ಮುಕುಂದ ಜೋಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts