More

    ಚಿತ್ರದುರ್ಗ: ಕುಡಿದು ದ್ವಿಚಕ್ರ ವಾಹನ ಚಾಲನೆ ಮಾಡಿ ದಂಡ ಪಾವತಿಸದ ವ್ಯಕ್ತಿಗೆ 1 ವರ್ಷ ಜೈಲು ಶಿಕ್ಷೆ

    ಚಿತ್ರದುರ್ಗ: ಕುಡಿದು ದ್ವಿಚಕ್ರ ವಾಹನ ಚಾಲನೆ ಮಾಡಿ ದಂಡ ಪಾವತಿಸದ ವ್ಯಕ್ತಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಬುಧವಾರ (ಫೆ.8) ಆದೇಶ ಹೊರಡಿಸಿದೆ.

    ಚಿತ್ರದುರ್ಗ ನಗರದ ಸಿದ್ದೇಶ್ವರ ಶಾಲೆಯ ಹಿಂಭಾಗದ ಬಡಾವಣೆ ನಿವಾಸಿ ರವಿಕುಮಾರ್ ಹಮಾಲಿ ಕೆಲಸ ಮಾಡಿಕೊಂಡಿದ್ದ. ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಮೇದೆಹಳ್ಳಿ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಮದ್ಯ ಸೇವಿಸಿ ಚಾಲನೆ ಮಾಡಿದ್ದಕ್ಕೆ 10,250 ರೂ. ದಂಡ ವಿಧಿಸಲಾಗಿತ್ತು.

    ನನ್ನ ಬಳಿ ಕೇವಲ 2 ಸಾವಿರ ಮಾತ್ರ ಕಟ್ಟಲು ಸಾಧ್ಯ ಎಂದು ನ್ಯಾಯಾಲಯದ ಮುಂದೆ ರವಿಕುಮಾರ್ ಹೇಳಿದ್ದ. ಅಷ್ಟು ದಂಡ ಕಟ್ಟಲು ರವಿಕುಮಾರ್​ ಕೈಯಲ್ಲಿ ಸಾಧ್ಯವಾಗದಿದ್ದಕ್ಕೆ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಕೆಂಪರಾಜು 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ. (ದಿಗ್ವಿಜಯ ನ್ಯೂಸ್​)

    ಅಸಹಜ ಲೈಂಗಿಕ ಕ್ರಿಯೆ, ವರದಕ್ಷಿಣೆ ಕಿರುಕುಳ ಆರೋಪ: ರಾಖಿ ಪತಿ ಆದಿಲ್​ಗೆ ನ್ಯಾಯಾಂಗ ಬಂಧನ

    ಮಗುವಿಗೆ ಜನ್ಮ ನೀಡಿದ ಕೇರಳದ ತೃತೀಯಲಿಂಗಿ ದಂಪತಿ! ಇದು ದೇಶದಲ್ಲೇ ಮೊದಲ ಪ್ರಕರಣ

    ಪ್ರೇಮಿಗಳ ದಿನದಂದು ‘ಅಪ್ಪಿಕೋ ದನ’; ಫೆ. 14 ‘ಕೌ ಹಗ್ ಡೇ’ ಎಂದು ಆಚರಿಸಲು ಸರ್ಕಾರದ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts