More

    ಲಕ್ಷ್ಮಿ ಪೂಜೆಗೆ ತೆಗೆದುಕೊಂಡು ಹೋಗ್ತಿದ್ದ 7 ಲಕ್ಷ ರೂ. ನಗದನ್ನು ಹಾಡಹಗಲೇ ಎಗರಿಸಿದ ಖದೀಮ!

    ಚಿತ್ರದುರ್ಗ: ದೀಪಾವಳಿ ದಿನವೇ ಚಿತ್ರದುರ್ಗದಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನವಾಗಿದ್ದು, ಲಕ್ಷ್ಮಿ ಪೂಜೆಗೆ ತೆಗೆದುಕೊಂಡು ಹೋಗುತ್ತಿದ್ದ 7 ಲಕ್ಷ ನಗದನ್ನು ಖದೀಮನೊಬ್ಬ ಹಾಡಹಗಲೇ ದೋಚಿ ಪರಾರಿಯಾಗಿದ್ದಾನೆ.

    ನಗರದ ಹೊಳಲ್ಕೆರೆ ರಸ್ತೆಯ ಮೋರ್ ಮಾಲ್ ಬಳಿ ಶುಕ್ರವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಡಿಕೆ ಮಂಡಿ ಮ್ಯಾನೇಜರ್ ಭೀಮಸಮುದ್ರ ಮೂಲದ ಓಂಕಾರಪ್ಪ ಎಂಬುವವರಿಗೆ ಸೇರಿದ ಹಣವಾಗಿದ್ದು, ಎಸ್​ಬಿಐ ಬ್ಯಾಂಕಿನಲ್ಲಿ ಹೊಸ ನೋಟು ಎಕ್ಸ್ ಚೇಂಜ್ ಮಾಡಿಕೊಂಡು ಹೋಗುವಾಗ ಕಳ್ಳತನ ನಡೆದಿದೆ.

    ಇದನ್ನೂ ಓದಿ: ಇವರು ಇನ್​ಸ್ಟಾಗ್ರಾಮ್​ಗೆ ಬಂದಿದ್ದೇ ತಡ, ಭರ್ಜರಿ ಫಾಲೋವರ್ಸ್!; ನಾಲ್ಕೇ ಗಂಟೆಗಳಲ್ಲಿ ದಾಖಲೆ!

    ಓಂಕಾರಪ್ಪ ಲಕ್ಷ್ಮಿಪೂಜೆಗಾಗಿ ಹೊಸನೋಟು ತೆಗೆದುಕೊಂಡು ಹೋಗುತ್ತಿದ್ದರು. ಬೈಕ್ ಹಿಂಬದಿ ಬ್ಯಾಗ್​ನಲ್ಲಿ ಹಣವನ್ನಿಟ್ಟು ಮನೆಗೆ ಹೋಗುವಾಗ ಮೋರ್ ಮಾಲ್ ಬಳಿ ಬೈಕ್ ನಿಲ್ಲಿಸಿ ಕಿರಾಣಿ ಅಂಗಡಿಗೆ ಚಾಕಲೇಟ್ ತರಲು ಹೋಗಿದ್ದಾರೆ. ಈ ವೇಳೆ ಹೊಂಚು ಹಾಕಿದ್ದ ಖತರ್ನಾಕ್ ಕಳ್ಳ ಹಣ ದೋಚಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸ್ಥಳಕ್ಕೆ ಕೋಟೆ ಸಿಪಿಐ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

    2 ಕಾರು, ಬಸ್​, ಕ್ಯಾಂಟರ್, ಟಾಟಾ ಏಸ್ ಸರಣಿ ಅಪಘಾತ; ಇಬ್ಬರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts