ಚಿತ್ರದುರ್ಗ: ದೀಪಾವಳಿ ದಿನವೇ ಚಿತ್ರದುರ್ಗದಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನವಾಗಿದ್ದು, ಲಕ್ಷ್ಮಿ ಪೂಜೆಗೆ ತೆಗೆದುಕೊಂಡು ಹೋಗುತ್ತಿದ್ದ 7 ಲಕ್ಷ ನಗದನ್ನು ಖದೀಮನೊಬ್ಬ ಹಾಡಹಗಲೇ ದೋಚಿ ಪರಾರಿಯಾಗಿದ್ದಾನೆ.
ನಗರದ ಹೊಳಲ್ಕೆರೆ ರಸ್ತೆಯ ಮೋರ್ ಮಾಲ್ ಬಳಿ ಶುಕ್ರವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಡಿಕೆ ಮಂಡಿ ಮ್ಯಾನೇಜರ್ ಭೀಮಸಮುದ್ರ ಮೂಲದ ಓಂಕಾರಪ್ಪ ಎಂಬುವವರಿಗೆ ಸೇರಿದ ಹಣವಾಗಿದ್ದು, ಎಸ್ಬಿಐ ಬ್ಯಾಂಕಿನಲ್ಲಿ ಹೊಸ ನೋಟು ಎಕ್ಸ್ ಚೇಂಜ್ ಮಾಡಿಕೊಂಡು ಹೋಗುವಾಗ ಕಳ್ಳತನ ನಡೆದಿದೆ.
ಇದನ್ನೂ ಓದಿ: ಇವರು ಇನ್ಸ್ಟಾಗ್ರಾಮ್ಗೆ ಬಂದಿದ್ದೇ ತಡ, ಭರ್ಜರಿ ಫಾಲೋವರ್ಸ್!; ನಾಲ್ಕೇ ಗಂಟೆಗಳಲ್ಲಿ ದಾಖಲೆ!
ಓಂಕಾರಪ್ಪ ಲಕ್ಷ್ಮಿಪೂಜೆಗಾಗಿ ಹೊಸನೋಟು ತೆಗೆದುಕೊಂಡು ಹೋಗುತ್ತಿದ್ದರು. ಬೈಕ್ ಹಿಂಬದಿ ಬ್ಯಾಗ್ನಲ್ಲಿ ಹಣವನ್ನಿಟ್ಟು ಮನೆಗೆ ಹೋಗುವಾಗ ಮೋರ್ ಮಾಲ್ ಬಳಿ ಬೈಕ್ ನಿಲ್ಲಿಸಿ ಕಿರಾಣಿ ಅಂಗಡಿಗೆ ಚಾಕಲೇಟ್ ತರಲು ಹೋಗಿದ್ದಾರೆ. ಈ ವೇಳೆ ಹೊಂಚು ಹಾಕಿದ್ದ ಖತರ್ನಾಕ್ ಕಳ್ಳ ಹಣ ದೋಚಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಕೋಟೆ ಸಿಪಿಐ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)