ಚಿತ್ರದುರ್ಗ: ಮೆದೇಹಳ್ಳಿ ರಸ್ತೆ ಮಸ್ಜಿದೆ-ಎ-ಖುಬಾ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಬಳಿಕ ಸಿಎಎ ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ನಡೆಸಿದರು.
ಕೂಡಾ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ, ಸಂವಿಧಾನಶಿಲ್ಪಿ ಅಂಬೇಡ್ಕರ್ ರಚಿಸಿರುವ ಸಂವಿಧಾನ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೂರಿದರು. ಮುಖಂಡರಾದ ಜುಬೇರ್, ಮುಫಿಜ್, ಮೆಹಬೂಬ್ಖಾನ್, ರಿಜ್ವಾನ್, ರಫಿ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿದ್ದರು.
ಹೊಳಲ್ಕೆರೆ ರಸ್ತೆಯಲ್ಲೂ ಪ್ರತಿಭಟನೆ: ಸಿಎಎ ವಿರೋಧಿಸಿ ಹೊಳಲ್ಕೆರೆ ರಸ್ತೆ ಮೊಹಮ್ಮದೀಯ ಮಸೀದಿ ಬಳಿ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ, ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಘೋಷಣೆ ಕೂಗಿದರು.
ಮುಖಂಡರಾದ ಇಲಿಯಾಸ್ ಹುಸೇನ್ ಮೌಲಾನ ನಿಸಾರ್, ಸೈಯದ್ ಖುದ್ದೂಸ್, ರಷೀದ್, ರಿಯಾಜ್ಖಾನ್, ನಿಸಾರ್ ಮತ್ತಿತರ ಪ್ರಮುಖರು ಇದ್ದರು.
ಡಿಸಿ ಕಚೇರಿ ಬಳಿ ದಸಂಸ ಧರಣಿ: ಸಿಎಎ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಶುಕ್ರವಾರ ಧರಣಿ ನಡೆಸಲಾಯಿತು.
ಪೌರತ್ವ ತಿದ್ದುಪಡಿ ಜಾರಿ ಸೇರಿ ವಿವಿಧ ದಾರಿ ಮೂಲಕ ಸಂವಿಧಾನ ಬದಲಾವಣೆಗೆ ಬಿಜೆಪಿ ಮುಂದಾಗಿದೆ ಂದು ಆರೋಪಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಎಂ.ಡಿ.ಚಂದ್ರಶೇಖರ್, ಮುಖಂಡರಾದ ಬೋರನಕುಂಟೆ ಜೀವೇಶ್, ಮಾಡನಾಯಕನಹಳ್ಳಿ ರಂಗಪ್ಪ, ಜಿ.ದಯಾನಂದ್, ರಂಗಪ್ಪ, ಮಲ್ಲಿಕಾರ್ಜುನ್, ಜಿ.ಎಚ್.ಶ್ರೀಧರ್ಘಾಟ್ ಪಾಲ್ಗೊಂಡಿದ್ದರು.