More

    ಸಂವಿಧಾನ ದೇಶಕ್ಕೆ ದೊಡ್ಡ ಕೊಡುಗೆ

    ಚಿತ್ರದುರ್ಗ: ದೇಶಕ್ಕೆ ಅಂಬೇಡ್ಕರ್ ಸಂವಿಧಾನ ಕೊಡುಗೆ ನೀಡುವ ಮೂಲಕ ಪ್ರತಿ ಪ್ರಜೆಗೆ ಹಕ್ಕು ಮತ್ತು ಸಮಾನತೆ ಒದಗಿಸಿದ್ದಾರೆ ಎಂದು ಅಂಬೇಡ್ಕರ್ ವಿಚಾರ ಮಂಚ್ ಅಧ್ಯಕ್ಷ ಡಾ.ಕೆ.ಕೆ.ಕಾಮಾನಿ ಹೇಳಿದರು.

    ಸಂವಿಧಾನ ದಿನದ ಅಂಗವಾಗಿ ನೆಹರು ಯುವಕೇಂದ್ರ, ಹಿರೇಗುಂಟನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತಿತರ ಸಂಘ, ಸಂಸ್ಥೆಗಳಾಶ್ರಯದಲ್ಲಿ ನಗರದ ಅಮೃತ ಆರ್ಯುವೇದಿಕ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಅಂಬೇಡ್ಕರ್ ಜೀವನ ಮತ್ತು ಸೇವೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಅಂಬೇಡ್ಕರ್ ನಾನಾ ಶೋಷಿತ ಸಮುದಾಯದವರ ದನಿಯಾದರು, ಎಲ್ಲರ ಸಮಾನತೆಗೆ ಶ್ರಮಿಸಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಗೆ ಬಹುದೊಡ್ಡ ಕೊಡುಗಡೆ ನೀಡಿದ್ದಾರೆ ಎಂದು ಹೇಳಿದರು.

    ಲೇಖಕ ಎಚ್.ಆನಂದ್‌ಕುಮಾರ್ ಮಾತನಾಡಿ, ಸಂವಿಧಾನವನ್ನು ಕೊಟ್ಟಂಥ ಅಂಬೇಡ್ಕರ್ ಅವರಿಗೆ ದೇಶ ಋಣಿಯಾಗಿರಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಿ.ಗುರುಸ್ವಾಮಿ ಮಾತನಾಡಿದರು. ಜಿ.ರವಿಕುಮಾರ್, ಸಿ.ಎಚ್.ರೇವಣ್ಣ, ಎಂ.ಎನ್.ರಾಜೇಶ್ವರಿ, ಎಂ.ಸಿ.ಚೈತನ್, ಬಿ.ಪ್ರಸನ್ನ, ಬಿ.ಮಹಂತೇಶ್ ಮತ್ತಿತರರು ಇದ್ದರು. ಎಚ್.ಎಂ.ವೆಂಕಟೇಶ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts