ಚಿತ್ರದುರ್ಗ: ನಗರದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಶನಿವಾರ ರಥಸಪ್ತಮಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಚಿತ್ರದುರ್ಗ ಪತಂಜಲಿ ಯೋಗ ಸಮಿತಿ ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್, ಇಂದು ಸೂರ್ಯನ ಹುಟ್ಟಿದ ದಿನ. ಇಂದಿನಿಂದ ಸೂರ್ಯನ ಕಿರಣಗಳ ಪ್ರಖರತೆ ಹೆಚ್ಚುವುದರಿಂದೊಂದಿಗೆ ಹಗಲಿನ ಸಮಯದಲ್ಲೂ ಹೆಚ್ಚಳವಾಗಲಿದೆ ಎಂದರು.
ವಸಂತ ಋತುವಿನ ಆಗಮನದಿಂದ ಪ್ರಕೃತಿಯಲ್ಲಿ ಹೊಸ ಬದಲಾವಣೆ ಕಾಣಲಾರಂಬಿಸುತ್ತದೆ. ಈ ದಿನ ಸೂರ್ಯೋದಯದ ಮೊದಲು ಒಂದು ಎಕ್ಕೆ ಎಲೆಯನ್ನು ತಲೆ ಮೇಲಿಟ್ಟು ಕೊಂಡು ಸೂರ್ಯಮಂತ್ರ ಪಠಿಸುತ್ತಾ ತಲೆ ಸ್ನಾನ ಮಾಡುವುದರಿಂದ ಸರ್ವ ಪಾಪಗಳು ಪರಿಹಾರವಾಗಿ, ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಆಡಳಿತಾಧಿಕಾರಿ ಹನುಮೇಶ್ ಪದಕಿ, ಸಂಚಾಲಕ ರಂಗಪ್ಪ ಇತರರಿದ್ದರು.