ತಾಳಗುಪ್ಪ: ಸಮೀಪದ ಹಿರೇಮನೆ ಬಸ್ ತಂಗುದಾಣ ಶಿಥಿಲಾವಸ್ಥೆ ತಲುಪಿದ್ದು ಬಸ್ಗಾಗಿ ಕಾಯುವವರು ಮಳೆಯಲ್ಲಿ ನೆನೆಯುವಂತಾಗಿದೆ.
ಐದು ವರ್ಷದ ಹಿಂದೆ ದುರಸ್ತಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದಿಂದ ನಿತ್ಯ 30ಕ್ಕೂ ಅಕ ವಿದ್ಯಾರ್ಥಿಗಳು ಸಂಚಾರ ಮಾಡುತ್ತಿದ್ದು ಅವರಿಗೆ ಸಾಕಷ್ಟು ತೊಂದರೆ ಆಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಸ್ಥಳೀಯರಾದ ತಾರಕನಾಥ.