ಕಂಪ್ಲಿ ; ಕುವೆಂಪುರ ವಿಚಾರಧಾರೆಗಳು ಅಲ್ಪ ಮನುಜನನ್ನು ವಿಶ್ವಮಾನವನನ್ನಾಗಿಸುತ್ತವೆ ಎಂದು ತಹಸೀಲ್ದಾರ ಶಿವರಾಜ ಹೇಳಿದರು.
ಇದನ್ನೂ ಓದಿ: ಗುಣಮಟ್ಟದ ಶಿಕ್ಷಣ ಕೊಡಿಸಿ ಮಕ್ಕಳ ಭವಿಷ್ಯ ರೂಪಿಸಿ: ಶಾಸಕ ಬೇಳೂರು
ತಹಸೀಲ್ ಸಭಾಂಗಣದಲ್ಲಿ ನಡೆದ ವಿಶ್ವ ಮಾನವ ದಿನಾಚರಣೆಯಲ್ಲಿ ಶುಕ್ರವಾರ ಮಾತನಾಡಿದರು.
ಮನುಷ್ಯನ ಲೌಕಿಕ ಜೀವನ ಅರ್ಥವಂತಿಕೆ ಮತ್ತು ವೈಚಾರಿಕತೆಯಿಂದ ಕುವೆಂಪು ಸಾಹಿತ್ಯ ರಚನೆಗೊಂಡಿದೆ. ಮಕ್ಕಳನ್ನ ಪರೀಕ್ಷೆಗೆ ತಯಾರಿಸದೆ ಜ್ಞಾನವಂತರನ್ನಾಗಿ ಮಾಡಬೇಕೆನ್ನುವುದೇ ಅವರ ನಿಲುವು ಆಗಿತ್ತು. ಸಾಹಿತ್ಯ ಓದಲು ಯುವಪೀಳಿಗೆ ಮುಂದಾಗಬೇಕು ಎಂದರು.
ಡಿಟಿ ಬಿ.ರವೀಂದ್ರಕುಮಾರ್, ಶಿರಸ್ತೆದಾರ್ ಎಸ್.ಡಿ.ರಮೇಶ್, ವಿಎಗಳಾದ ವಿಜಯಕುಮಾರ್, ಲಕ್ಷ್ಮಣನಾಯ್ಕ, ಮಾಲತೇಶ, ಪ್ರಭುಲಿಂಗ, ಕಚೇರಿ ಸಿಬ್ಬಂದಿ ರಾಧಿಕಾ, ವನಿತಾ, ವಿಜಯಲಕ್ಷ್ಮೀ, ಕುಸುಮ, ಅಚ್ಯುತಾ, ಪಿ.ಸಿ.ಅಂಜಿನಿ, ಸರ್ವೇಯರ್ ಎಂ.ಪಿ.ಮಹಾಂತೇಶ ಇತರರಿದ್ದರು.
ಪುರಸಭೆಯಲ್ಲಿ ಜರುಗಿದ ವಿಶ್ವ ಮಾನವ ದಿನಾಚರಣೆಯಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಎಂ.ವಸಂತಮ್ಮ, ಮೇಘನಾ, ಪ್ರಕಾಶ್, ತುಳಸಿ, ಮೋಸೀನ್ಬೇಗಮ್, ಗೌಸ್ ಇತರರಿದ್ದರು.