More

    ಗಣೇಶ್​-ಆನಂದ್ ಜೋಡಿಗೆ ರ‍್ಯಾಲಿ ಆಫ್ ಚಿಕ್ಕಮಗಳೂರು

    ಚಿಕ್ಕಮಗಳೂರು: ರಾಷ್ಟ್ರ ಮಟ್ಟದ ಟಿಎಸ್​ಡಿ ಮಾದರಿಯ ರ‍್ಯಾಲಿ ಆಫ್ ಚಿಕ್ಕಮಗಳೂರು ಪ್ರಶಸ್ತಿಗೆ ಗಣೇಶ್​ವುೂರ್ತಿ ಮತ್ತು ಸಹಚಾಲಕ ಆನಂದ್ ಶಂಕರ್ ಭಾಜನರಾದರು.

    ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಎರಡು ದಿನಗಳ, ಎರಡು ಹಂತದ ರ‍್ಯಾಲಿ ಶನಿವಾರ ಮುಕ್ತಾಯಗೊಂಡಿತು. ಚಾಲಕ ಗಣೇಶ್ ಅವರು ಸಹಚಾಲಕ ಆನಂದ್ ಅವರ ಚಾಣಾಕ್ಷತನದ ನೆರವಿನಿಂದ ಅತ್ಯಂತ ಕ್ಲಿಷ್ಟಕರವಾಗಿದ್ದ ರ್ಯಾಲಿಯ ಮಾರ್ಗವನ್ನು ಪೂರೈಸಿ ತಮ್ಮ ಸಮೀಪದ ಸ್ಪರ್ಧಿ ಈರೋಡ್​ನ ಕೆ.ಪಿ.ಕಾರ್ತಿಕ್ ಮಾರುತಿ ಮತ್ತು ಟಿ.ನಾಗರಾಜ್ ಅವರನ್ನು ಮಣಿಸಿದರು.

    ಚಾಲಕನ ಕೌಶಲಕ್ಕಿಂತಲೂ ಸಹಚಾಲಕನ ಕರಾರುವಕ್ಕಾದ ಲೆಕ್ಕಾಚಾರ ಮಹತ್ವದ್ದಾಗಿದ್ದು, ಸಹಚಾಲಕನ ಒಂದು ಸಣ್ಣ ತಪ್ಪುಗಳನ್ನೂ ಲೆಕ್ಕ ಹೆಚ್ಚಿನ ಪೆನಾಲ್ಟಿ ಪಾಯಿಂಟ್​ಗೆ ದಾರಿ ಮಾಡಿಕೊಡುತ್ತದೆ. 180 ಕಿ.ಮೀ. ಮೊದಲ ಹಂತದ ಮುಕ್ತಾಯದಲ್ಲಿ ಪ್ರತಿಸ್ಪರ್ಧಿಗಿಂತ 38 ಸೆಕೆಂಡ್​ಗಳ ಕಡಿಮೆ ಪೆನಾಲ್ಟಿ ಪಾಯಿಂಟ್​ಗಳೊಂದಿಗೆ ಹಿನ್ನಡೆ ಅನುಭವಿಸಿದ್ದ ಕಾರ್ತಿಕ್ ಮಾರುತಿ ಹಾಗೂ ಸಹಚಾಲಕ ಟಿ.ನಾಗರಾಜ್ ಶನಿವಾರ ನಡೆದ ಎರಡನೇ ಹಂತದ 50 ಕಿ.ಮೀ. ರ್ಯಾಲಿಯಲ್ಲಿ ತಮ್ಮೆಲ್ಲ ಅನುಭವ ಬಳಸಿ ಅದ್ಭುತ ಪ್ರದರ್ಶನ ನೀಡಿದರೂ ಗಣೇಶ್ ತಂಡಕ್ಕಿಂತ 15 ಸೆಕೆಂಡ್​ಗಳ ಕಡಿಮೆ ಪೆನಾಲ್ಟಿ ಪಡೆದು ತಮ್ಮ ಪ್ರತಿಸ್ಪರ್ಧಿಯ ಗೆಲುವಿನ ಅಂತರ ತಗ್ಗಿಸಲು ಮಾತ್ರ ಶಕ್ತರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts