ಚಿಕ್ಕಮಗಳೂರು: ದೇಶಕ್ಕಾಗಿ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕ ಇದೀಗ ಮಗನ ಆಸ್ತಿ ದಾಹದಿಂದ ಬೀದಿಗೆ ಬಿದ್ದಿದ್ದು, ತುತ್ತು ಅನ್ನಕ್ಕಾಗಿ ಬೀದಿ ಬೀದಿ ಅಲೆಯುವಂತಾಗಿದೆ.
ಇದನ್ನೂ ಓದಿ: ಕರೊನಾಕ್ಕೆ ಆಯುರ್ವೇದ ಮದ್ದು; ಆಯುಷ್ ಮತ್ತು ಸಿಎಸ್ಐಆರ್ ಪ್ರಯತ್ನ ಸಫಲವಾಗುತ್ತೆ
ರಾಮಪ್ಪ (77) ಬೀದಿಗೆ ಬಿದ್ದ ಭಾರತೀಯ ಮಾಜಿ ಸೈನಿಕ. ಕೊಪ್ಪ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ದಿನ ನಿತ್ಯದ ಊಟಕ್ಕಾಗಿ ಕೆಲ ದಿನಗಳಿಂದ ರಾಮಪ್ಪ ಅವರು ಕೊಪ್ಪ ಪಟ್ಟಣದಲ್ಲಿ ಅಲೆಯುತ್ತಿದ್ದಾರೆ.
ಆಸ್ತಿಯ ದಾಹಕ್ಕಾಗಿ ಅಪ್ಪನನ್ನೇ ಮಗ ಬೀದಿಗೆ ತಳ್ಳಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಹೆಂಡತಿಯನ್ನು ಕಳೆದುಕೊಂಡಿರುವ ಮಾಜಿ ಯೋಧ, ಇದೀಗ ಪಾಳುಬಿದ್ದ ಹಳೇ ಬಸ್ ಸ್ಟ್ಯಾಂಡ್ ಕಟ್ಟಡದಲ್ಲಿ ವಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿಯತ್ತ ಮಾಗಡಿ ಬಾಲಕೃಷ್ಣ: ಸಂಸದ ಡಿ.ಕೆ. ಸುರೇಶ್ ಡೋಂಟ್ ಕೇರ್!
ರಾಮಪ್ಪ ಅವರು ಹೃದಯದ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದು, ಸರಿಯಾದ ಸಮಯದಲ್ಲಿ ಊಟ ಹಾಗೂ ಆರೈಕೆಯಿಲ್ಲದೇ ಕಣ್ಣಿರು ಹಾಕುತ್ತಾ ಕೊಪ್ಪ ಪಟ್ಟಣದಲ್ಲಿ ಸುತ್ತಾಡುವಂತಾಗಿದ್ದು, ಮಗನ ನೆರಳಿನ ನಿರೀಕ್ಷೆಯಲ್ಲಿ ಕಾಲ ದೂಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ತುತ್ತು ಅನ್ನಕ್ಕಾಗಿ ಮಾಜಿ ಯೋಧನ ಪರದಾಟ: ಆಸ್ತಿಗಾಗಿ ಅಪ್ಪನನ್ನೇ ಬೀದಿಗೆ ತಳ್ಳಿದ ಮಗಚಿಕ್ಕಮಗಳೂರು: ದೇಶಕ್ಕಾಗಿ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕ ಇದೀಗ ಮಗನ ಆಸ್ತಿ ದಾಹದಿಂದ ಬೀದಿಗೆ ಬಿದ್ದಿದ್ದು, ತುತ್ತು ಅನ್ನಕ್ಕಾಗಿ ಬೀದಿ ಬೀದಿ ಅಲೆಯುವಂತಾಗಿದೆ.ರಾಮಪ್ಪ (77) ಬೀದಿಗೆ ಬಿದ್ದ ಭಾರತೀಯ ಮಾಜಿ ಸೈನಿಕ. ಕೊಪ್ಪ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ದಿನ ನಿತ್ಯದ ಊಟಕ್ಕಾಗಿ ಕೆಲ ದಿನಗಳಿಂದ ರಾಮಪ್ಪ ಅವರು ಕೊಪ್ಪ ಪಟ್ಟಣದಲ್ಲಿ ಅಲೆಯುತ್ತಿದ್ದಾರೆ.#Chikkamagaluru #ExSoldier #Koppa #Son #NoShelter
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 14, 2020
ರೈತರಿಗೆ, ಕಾರ್ಮಿಕರಿಗೆ ಬಂಪರ್ ಗಿಫ್ಟ್: ಹಣಕಾಸು ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್