More

    ಶಿಕಾರಿಪುರದಲ್ಲಿ ಎಂದಿನಂತೆ ಜನಜೀವನ

    ಶಿಕಾರಿಪುರ: ಸಿಎಂ ಸ್ವಕ್ಷೇತ್ರ ಶಿಕಾರಿಪುರಲ್ಲಿ ಬಂದ್ ಸಂಪೂರ್ಣ ವಿಫಲವಾಗಿದ್ದು ಇಡೀ ದಿನ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಂದಿನಂತೆ ಜನಜೀವನ ಇತ್ತು. ಪ್ರತಿವಾರ ನಡೆಯುವ ವಾರದ ಸಂತೆ ಎಂದಿನಂತೆ ನಡೆಯಿತು. ಸರ್ಕಾರಿ ಮತ್ತು ಖಾಸಗಿ ಬಸ್​ಗಳ ಓಡಾಟದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಅಂಗಡಿ ಮುಂಗ್ಗಟ್ಟು, ಉಪಾಹಾರ ಮಂದಿರಗಳು ಬಾಗಿಲು ತೆರೆದಿದ್ದವು. ಪಟ್ಟಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಜಯಕರ್ನಾಟಕ ಜನಪರವೇದಿಕೆ ಶುಕ್ರವಾರವೇ ಬಂದ್​ನಿಂದ ದೂರ ಉಳಿಯುವುದಾಗಿ ಘೊಷಿಸಿದ್ದು ಉಳಿದಂತೆ ಬಂದ್​ಗೆ ಸಾರ್ವಜನಿಕವಾಗಿ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ. ಶ್ರೀ ಹುಚ್ಚರಾಯಸ್ವಾಮಿ ದರ್ಶನಕ್ಕೆ ಕಾರ್ತಿಕ ಶನಿವಾರದ ಕಾರಣ ಸಾಕಷ್ಟು ಭಕ್ತರು ಆಗಮಿಸಿದ್ದು ಸ್ವಾಮಿಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts