More

    ನನಗೆ ಬಜೆಟ್​ನ ಉದ್ದೇಶವೇ ಅರ್ಥವಾಗಲಿಲ್ಲ ಎಂದ್ರು ಕಾಂಗ್ರೆಸ್​ ಮುಖಂಡ ಪಿ.ಚಿದಂಬರಂ; ನಿರ್ಮಲಾ ಸೀತಾರಾಮನ್​ಗೆ ಕೊಟ್ಟ ಅಂಕ ಎಷ್ಟು ಗೊತ್ತಾ?

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಬಜೆಟ್​ ಕಳಪೆಯಾಗಿತ್ತು ಎಂದು ಕಾಂಗ್ರೆಸ್​ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

    ನಿರ್ಮಲಾ ಸೀತಾರಾಮನ್​ ಅವರು 160 ನಿಮಿಷದ ಸುದೀರ್ಘ ಬಜೆಟ್​ ಮಂಡನೆ ಮಾಡಿದ್ದರ ಬಗ್ಗೆ ಮಾತನಾಡಿದ ಚಿದಂಬರಂ, ಈಗೆರಡು ವರ್ಷಗಳಿಂದ ದೀರ್ಘ ಬಜೆಟ್ ಭಾಷಣವನ್ನು ಕೇಳುತ್ತಿದ್ದೇವೆ. ಈ ಬಾರಿಯೂ 160 ನಿಮಿಷ ಇತ್ತು. ಅದನ್ನು ಕೇಳಿ ನಿಮಗೆಲ್ಲ ಆಯಾಸ ಆಗಿರಬಹುದು. ಹಾಗೇ ನಾನೂ ದಣಿದಿದ್ದೇನೆ. ಆದರೆ ಇಷ್ಟೆಲ್ಲ ಕೇಳಿಯಾದ ಮೇಲೆಯೂ ಪ್ರಸಕ್ತ ವರ್ಷದ ಬಜೆಟ್​ ಏನು ಸಂದೇಶ ಹೊಂದಿತ್ತು, ಯಾವ ಉದ್ದೇಶವನ್ನು ಒಳಗೊಂಡಿತ್ತು ಎಂಬುದು ನನಗೆ ಅರ್ಥವಾಗಿಲ್ಲ. ನೆನಪಿನಲ್ಲಿಟ್ಟುಕೊಳ್ಳುವಂತಹ ಅಥವಾ ಉಲ್ಲೇಖಿಸುವಂತಹ ಯಾವುದೇ ಹೇಳಿಕೆಗಳನ್ನೂ ಬಜೆಟ್​ ಭಾಷಣದಲ್ಲಿ ಹೇಳಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಚಿದಂಬರಂ ಹೇಳಿದರು.

    ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು, ಬೆಳವಣಿಗೆ ದರದ ವೇಗ ಹೆಚ್ಚಳ, ಖಾಸಗೀ ಹೂಡಿಕೆ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಜಾಗತಿಕ ವ್ಯಾಪಾರದಲ್ಲಿ ಹೆಚ್ಚಿನ ಪಾಲು ಪಡೆಯುವ ಬಗ್ಗೆ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿಲ್ಲ ಎಂದರು.

    ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಕೇಂದ್ರ ಬಜೆಟ್​ಗೆ 1ರಿಂದ 10ರವರೆಗೆ ಎಷ್ಟು ಅಂಕ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ, 10ರಲ್ಲಿ ಇರುವ 1 ಮತ್ತು 0 ದಲ್ಲಿ ಯಾವ ಅಂಕಿಯನ್ನು ನೀವು ಆಯ್ಕೆ ಮಾಡಿಕೊಂಡರೂ ನಾನು ಅದಕ್ಕೆ ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts