ಲಕ್ಷ್ಮೇಶ್ವರ: ಪಟ್ಟಣ ಹಾಗೂ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಅನೇಕ ಅವಾಂತರ ಸೃಷ್ಟಿಸಿದೆ.ಪಟ್ಟಣದ ಆಸಾರ ಓಣಿಯಲ್ಲಿ 2 ವಿದ್ಯುತ್ ಕಂಬ ಬಿದ್ದಿವೆ. ಸೋಮೇಶ್ವರ ನಗರ, ವಿನಾಯಕ ನಗರ, ಶಿಗ್ಲಿ ಕ್ರಾಸ್ನಲ್ಲಿ ವಿದ್ಯುತ್ ತಂತಿ ಮರದ ಮೇಲೆ ಬಿದ್ದು 5 ಗಂಟೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಸಂತೆ ದಿನವಾಗಿದ್ದರಿಂದ ಏಕಾಏಕಿ ಗಾಳಿಸಹಿತ ಬೀಸಿದ ಮಳೆಯಿಂದ ವ್ಯಾಪಾರಸ್ಥರು, ಜನರು ಪರದಾಡಿದರು. ಅಲ್ಲಲ್ಲಿ ಗಾಳಿಗೆ ತಗಡಿನ ಶೆಡ್ಡುಗಳು ಹಾರಿ ಹೋದವು. ಬಾಲೇಹೊಸೂರ ಗ್ರಾಮದ ಹೊರವಲಯದ ಹೊಳಲಪ್ಪ ಸವಣೂರ ಅವರ ತೋಟದ ಮನೆಗೆ ಸಿಡಿಲು ಬಡಿದು ಎಮ್ಮೆ, 2 ಟಗರು, 50 ಕೋಳಿಬಲಿಯಾಗಿವೆ. ಮನೆಯಲ್ಲಿನ ದವಸ ಧಾನ್ಯ, ವಸ್ತುಗಳು ಹಾನಿಗೀಡಾಗಿವೆ. ಅಲ್ಲಲ್ಲಿ ಬಾಳೆ, ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದೆ.