ದಂತೇವಾಡ: ನಕ್ಸಲರಿಗೆ ಸಹಾಯ ಮಾಡುತ್ತಿದ್ದ ಆರೋಪದಡಿ ಬಿಜೆಪಿಯ ದಂತೇವಾಡಾ ಜಿಲ್ಲಾ ಘಟಕದ ಉಪಾಧ್ಯಕ್ಷ ಜಗತ್ ಪೂಜಾರಿ ಮತ್ತು ಇನ್ನೀರ್ವರು ಬಂಧಿತರಾಗಿದ್ದಾರೆ.
ಛತ್ತೀಸ್ಗಢದಲ್ಲಿ ನಕ್ಸಲರ ಹಾವಳಿ ವಿಪರೀತವಾಗಿದೆ. ಅವರಿಗೆ ಬಿಜೆಪಿ ಉಪಾಧ್ಯಕ್ಷ ಮತ್ತಿತರರು ಸೇರಿ ಟ್ರ್ಯಾಕ್ಟರ್, ಗೂಡ್ಸ್ ಸೇರಿ ಹಲವು ಸರಕು, ಸಾಮಗ್ರಿಗಳನ್ನು ಒದಗಿಸುತ್ತಿದ್ದರು. ಸುಮಾರು ಒಂದು ದಶಕಗಳಿಂದಲೂ ನಕ್ಸಲರಿಗೆ ನೆರವು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂವರನ್ನು ಮಾವೋವಾದಿ ಮುಖಂಡ ಅಜಯ್ ಅಲಾಮಿಗಾಗಿ 9,10, 000 ರೂ.ಮೌಲ್ಯದ ಟ್ರ್ಯಾಕ್ಟರ್ ಖರೀದಿ ಮಾಡುತ್ತಿದ್ದಾಗ ಬಂಧಿಸಲಾಗಿದೆ. ಅಜಯ್ ಬಂಧನಕ್ಕಾಗಿ ಆತ ತಲೆಗೆ 5 ಲಕ್ಷ ರೂಪಾಯಿಯನ್ನು ಈ ಹಿಂದೆಯೇ ಕಟ್ಟಲಾಗಿದೆ. ಯಾರೇ ಆತನ ಸುಳಿವು ನೀಡಿ, ಬಂಧನಕ್ಕೆ ಸಹಕಾರ ನೀಡಿದರೂ ಅವರಿಗೆ 5 ಲಕ್ಷ ರೂ.ಬಹುಮಾನ ಕೊಡುವುದಾಗಿ ಹಿಂದೆಯೇ ಘೋಷಿಸಿದ್ದೆವು. ಇದೀಗ ಟ್ರ್ಯಾಕ್ಟರ್ನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಮಾಜಿ ಪ್ರೇಯಸಿಯ ನಿಶ್ಚಿತಾರ್ಥ ಸುಶಾಂತ್ ನೋವಿಗೆ ಕಾರಣ? ಇವರ ಸಾವಿನ ಸುದ್ದಿ ಕೇಳಿ ಫೋನ್ ಕೆಳಗಿಟ್ಟ ಅಂಕಿತಾ
ಜಗತ್ ಪೂಜಾರಿ ಮತ್ತು ಅಲಾಮಿ ನಡುವೆ ಹಲವು ರೀತಿಯ ವ್ಯವಹಾರಗಳು ನಡೆಯುತ್ತಿವೆ. ಬಿಜೆಪಿ ಮುಖಂಡ ನಕ್ಸಲರಿಗೆ ಹಲವು ಸರಕು, ಸಾಮಗ್ರಿಗಳನ್ನು ಒದಗಿಸಿ, ಹಣ ಗಳಿಸುತ್ತಿದ್ದಾರೆಂಬ ನಿಖರ ಮಾಹಿತಿ ಸಿಕ್ಕಿತ್ತು. ಹಾಗಾಗಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಅಧಿಕಾರಿಗಳ ತಂಡ ನಿಯೋಜಿಸಲಾಗಿತ್ತು. ಗೀದಮ್ ಬಳಿ ಎರಡು ಕಡೆ ಬ್ಯಾರಿಕೇಡ್ ಹಾಕಿ, ಎಲ್ಲ ಟ್ರ್ಯಾಕ್ಟರ್ಗಳನ್ನೂ ಪರಿಶೀಲನೆ ಮಾಡಲಾಗುತ್ತಿತ್ತು. ಆಗಲೇ ಸಿಕ್ಕಿಬಿದ್ದಿದ್ದಾರೆ. ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಜಗತ್ ಪೂಜಾರಿ ಕೂಡ ಒಪ್ಪಿಕೊಂಡಿದ್ದಾರೆ. 10 ವರ್ಷಗಳಿಂದಲೂ ನಕ್ಸಲರಿಗೆ ಟ್ರ್ಯಾಕ್ಟರ್ ಸೇರಿ, ಅನೇಕ ಸರಕು ಒದಗಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ಸ್ಥಳೀಯ ಎಸ್ಪಿ ತಿಳಿಸಿದ್ದಾರೆ. ಇದನ್ನೂ ಓದಿ: ಚಿರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ರಾಘವೇಂದ್ರ ರಾಜಕುಮಾರ್ ಕುಟುಂಬ
ಈ ಕಾರ್ಯಾಚರಣೆ ಒಮ್ಮಿಂದೊಮ್ಮೆಲೇ ಆಗಿದ್ದಲ್ಲ. ಸುಮಾರು ಒಂದು ತಿಂಗಳ ಕಾಲ ಗುಪ್ತಚರ ದಳದ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಜಗತ್ ಪೂಜಾರಿ ಮಾವೋವಾದಿಗಳನ್ನು ಭೇಟಿಯಾಗುತ್ತಿದ್ದರು. ಅವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದರು ಎಂಬುದು ಖಚಿತವಾದ ಬಳಿಕ ಪೊಲೀಸರು ಅಧಿಕೃತವಾಗಿ ತನಿಖೆಗೆ ಇಳಿದಿದ್ದು ಎಂದು ಹೇಳಿದ್ದಾರೆ. (ಏಜೆನ್ಸೀಸ್)
‘ಆತ ನನ್ನನ್ನು ತುಂಬ ಪ್ರೀತಿಸುತ್ತಿದ್ದ…ನಾನು ಅವನ ಮಿಸ್ ಮಾಡಿಕೊಳ್ಳುತ್ತೇನೆ…’: ಶಾರುಖ್ ಖಾನ್ ಕಣ್ಣೀರು