ಬೆಂಗಳೂರು: ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಇಂದಿನಿಂದ (ನ.07)ಪ್ರಾಯೋಗಿಕ ಸಂಚಾರ ಆರಂಭಿಸಿದೆ.
ಭಾನುವಾರ ರಾತ್ರಿ ಚೆನ್ನೈನ ಎಂ.ಜಿ. ರಾಮಚಂದ್ರನ್ ರೈಲ್ವೇ ನಿಲ್ದಾಣದಿಂದ ಸಂಚಾರ ಆರಂಭಿಸಿದ್ದು, ಇಂದು ಬೆಂಗಳೂರು ತಲುಪಿದೆ. ಪೆರಂಬದೂರಿನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾದ ಈ ರೈಲು, ದೇಶದ ಮೊದಲ ಅತಿವೇಗದ ರೈಲು ಎಂಬ ಖ್ಯಾತಿಗೆ ಪಾತ್ರವಾಗಿದೆ.
ನ.11ರಂದು ಪ್ರಧಾನಿ ಮೋದಿ, ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ತಾಂತ್ರಿಕ ದೋಷ ಪತ್ತೆಗಾಗಿ ಪ್ರಾಯೋಗಿಕವಾಗಿ ಸಂಚಾರ ಆರಂಭಿಸಲಾಗಿದೆ.
ಇಂದು ಬೆಳಗ್ಗೆ 10.20ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದ ರೈಲು, ತಕ್ಷಣ ಮೈಸೂರಿಗೆ ತೆರಳಿದೆ.
The fifth Vande Bharat Express will be inaugurated by Our Hon'ble PM Shri @narendramodi ji on 11th Nov 2022. This will be the first semi-high speed service for southern India.
— Pratap Simha (@mepratap) November 2, 2022
Schedule of Chennai-Bengaluru-Mysuru Vande Bharat Express. pic.twitter.com/t07SX0KqtE