ಚೆನ್ನೈ: ಮೆಡಿಕಲ್ ಸ್ಟೋರ್ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ 753 ಕೋಟಿ ರೂಪಾಯಿ ಜಮಾ ಆಗಿದೆ. ಮಹಮ್ಮದ್ ಇದ್ರಿಸ್ ಎಂಬುವರು ತಮ್ಮ ಸ್ನೇಹಿತನಿಗೆ ಶುಕ್ರವಾರ 2 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಬಳಿಕ ಕಳೆದ ಶನಿವಾರ ಬ್ಯಾಲೆನ್ಸ್ ಪರಿಶೀಲಿಸಿದಾಗ ಅವರ ಖಾತೆಯಲ್ಲಿ 753 ಕೋಟಿ ರೂಪಾಯಿ ಇರುವುದು ತಿಳಿದಿದೆ.
ತಿರುನೆಲ್ವೇಲಿ ಜಿಲ್ಲೆಯ ತೆನಾಂಪೇಟೆಯ ಎಲ್ಡಮ್ಸ್ನಲ್ಲಿ ವಾಸಿಸುತ್ತಿರುವ ಮಹಮ್ಮದ್ ಇದ್ರಿಸ್, ತಮ್ಮ ಮೊಬೈಲ್ಗೆ ಬಂದಿದ್ದ ಮೇಸೆಜ್ ಗಮನಿಸಿ ಕೆಲಸ ಮಾಡುವ ಸ್ಥಳದಿಂದ ತೆನಾಂಪೇಟೆಯಲ್ಲೇ ಇರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಎಸ್ಎಂಎಸ್ ಸಂದೇಶದಲ್ಲಿ ದೋಷ ಉಂಟಾಗಿದೆ. ಬೇರೆ ಖಾತೆಯ ಬ್ಯಾಲೆನ್ಸ್ ಮೇಸೆಜ್ ಅವರಿಗೆ ಹೋಗಿದೆ ಆದರೆ ಖಾತೆಯಲ್ಲಿ ಹಣ ಜಮೆಯಾಗಿಲ್ಲ. ಗ್ರಾಹಕರ ಖಾತೆಯನ್ನು ರ್ನಿಬಂಧಿಸಿಲ್ಲ. ತಂಡವು ದೋಷ ಸರಿಪಡಿಸುವ ಕೆಲಸ ಮಾಡುತ್ತಿದೆ. ಇದರಿಂದ ಆಗಿರುವ ಅನಾನುಕೂಲಕ್ಕೆ ಬ್ಯಾಂಕ್ ವಿಷಾದ ವ್ಯಕ್ತಪಡಿಸುತ್ತದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ವಕ್ತಾರರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಇಂತಹ ಟನೆ ನಡೆದಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಎರಡು ಬಾರಿ ನಡೆದಿದೆ. ಸೆಪ್ಟೆಂಬರ್ 17ರಂದು ಕ್ಯಾಬ್ ಡೆವರ್ಗೆ ಟಿಎಂಬಿ ಬ್ಯಾಂಕ್ನಿಂದ 9,000 ಕೋಟಿ ರೂಪಾಯಿ ಜಮೆ ಆಗಿತ್ತು. ಅಕ್ಟೋಬರ್ 5 ರಂದು ತಂಜಾವೂರಿನ ನಿವಾಸಿ ಒಬ್ಬರಿಗೆ 750 ಕೋಟಿ ರೂಪಾಯಿ ಜಮೆಯಾಗಿತ್ತು.
ಕ್ಯಾಬ್ ಡೆವರ್ ಪ್ರಕರಣದಲ್ಲಿ ಅನುಚಿತ ವರ್ತನೆ ಹಾಗೂ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿದ್ದ ಬ್ಯಾಂಕ್ ಅಧಿಕಾರಿಗಳು, ಕಾರು ಖರೀದಿಗೆ ಸಾಲದ ಭರವಸೆ ನೀಡಿದ್ದರು ಹಾಗೂ ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿಕೊಂಡಿದ್ದ 23 ಸಾವಿರ ರೂ.ಗಳನ್ನು ಮರಳಿಸುವುದು ಬೇಡ ಎಂದು ಹೇಳಿದ್ದರು.
ಮೊಬೈಲ್ನಲ್ಲಿ 753 ಕೋಟಿ ರೂಪಾಯಿ ಬ್ಯಾಲೆನ್ಸ್ ಇರುವುದಾಗಿ ಮೇಸೆಜ್ ಸ್ವೀಕರಿಸಿದ ತಕ್ಷಣ ಯುಪಿಐ ರೆರೆನ್ಸ್ ನಂಬರ್ನೊಂದಿಗೆ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದೆ. ಆದರೆ ಅವರು ಸರಿಯಾಗಿ ಸ್ಪಂದಿಸಲಿಲ್ಲ. ಕೆಲವು ಗಂಟೆಗಳ ನಂತರ ನನ್ನ ಬ್ಯಾಂಕ್ ಖಾತೆಯನ್ನು ರ್ನಿಬಂಧಿಸಿದ್ದಾರೆ. ಬ್ಯಾಂಕ್ ಶಾಖೆಯ ಅಧಿಕಾರಿಗಳು ಸರಿಯಾದ ವಿವರಣೆ ನೀಡದ ಕಾರಣ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೇನೆ.
-ಮಹಮ್ಮದ್ ಇದ್ರಿಸ್