ಚನ್ನಗಿರಿ: ಪಟ್ಟಣದ ಶ್ರೀ ವಿಠಲ ರುಖುಮಾಯಿ ಕಲ್ಯಾಣ ಮಂದಿರದಲ್ಲಿ ಮಂಗಳವಾರ ನಡೆಯುತ್ತಿದ್ದ ವಿವಾಹದಲ್ಲಿ ನವ ದಂಪತಿ ಸೇರಿ ಮದುವೆಗೆ ಬಂದವರಿಗೆ ಪುರಸಭೆ ಸಿಬ್ಬಂದಿ ಮತದಾನ ಮಾಡುವಂತೆ ಪ್ರೇರೇಪಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.
ಚನ್ನಗಿರಿ: ಪಟ್ಟಣದ ಶ್ರೀ ವಿಠಲ ರುಖುಮಾಯಿ ಕಲ್ಯಾಣ ಮಂದಿರದಲ್ಲಿ ಮಂಗಳವಾರ ನಡೆಯುತ್ತಿದ್ದ ವಿವಾಹದಲ್ಲಿ ನವ ದಂಪತಿ ಸೇರಿ ಮದುವೆಗೆ ಬಂದವರಿಗೆ ಪುರಸಭೆ ಸಿಬ್ಬಂದಿ ಮತದಾನ ಮಾಡುವಂತೆ ಪ್ರೇರೇಪಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಾಸೀಂ ಮಾತನಾಡಿ, ಉತ್ತಮ ನಾಯಕರ ಆಯ್ಕೆ ಮಾಡಲು ಸಂವಿಧಾನ ನಮಗೆ ಮತದಾನ ಹಕ್ಕು ನೀಡಿದೆ. ಅದನ್ನು ನಿರ್ಲಕ್ಷೃ ಮಾಡದೇ ಮತ ಚಲಾಯಿಸಬೇಕು. ಜನರ ಕಷ್ಟ- ಸುಖ ಆಲಿಸುವಂತಹ ನಾಯಕರ ಆಯ್ಕೆ ಆಗಬೇಕು ಎಂದರು.
ಮತದಾನ ದಿನ ಸಮೀಪ ಬಂದಿದ್ದು, ಹಣ, ಆಸೆ, ಆಮಿಷಗಳಿಗೆ ಬಲಿಯಾಗಿ ಮತ ನೀಡಬೇಡಿ ಎಂದರು. ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಇಂಜಿನಿಯರ್ ಹಾಲೇಶ್, ನಿಂಗಪ್ಪ, ವಿಜಯ್, ರಾಮಪ್ಪ ಇದ್ದರು.