More

    ಜಿಲ್ಲಾ ವಕೀಲರ ಸಂಘದಿಂದ ಕಂಬನಿ

    ಚಾಮರಾಜನಗರ: ಸಂಸದ ವಿ.ಶ್ರೀನಿವಾಸಪ್ರಸಾದ್ ನಿಧನದ ಹಿನ್ನೆಲೆಯಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಪ್ರಸಾದ್ ಅವರ ಭಾವಚಿತ್ರವನ್ನಿಟ್ಟು ಮೌನಾಚರಣೆ ಮಾಡುವ ಮೂಲಕ ನಾಯಕನ ಆತ್ಮಕ್ಕೆ ಶಾಂತಿ ಕೋರಲಾಯಿತು. ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ ಮಾತನಾಡಿ, ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ವಿ.ಶ್ರೀನಿವಾಸಪ್ರಸಾದ್ ತಮ್ಮದೇ ಛಾಪು ಮೂಡಿಸಿದ್ದರು. ದೀನ ದಲಿತರು, ಬಡವರು ಮತ್ತು ಎಲ್ಲ ವರ್ಗದವರ ಶ್ರೇಯಸ್ಸಿಗೆ ದುಡಿದಿದ್ದರು ಎಂದರು.

    ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಮೋಳೆ ರಂಗಸ್ವಾಮಿ ಮಾತನಾಡಿ, ದಲಿತ ಸೂರ್ಯ ವಿ.ಶ್ರೀನಿವಾಸಪ್ರಸಾದ್ ಅವರು ದಲಿತರ ಅಭಿವೃದ್ಧಿಗಾಗಿ ಸದಾ ಚಿಂತನೆ ನಡೆಸಿದ್ದರು. ಇಂತಹ ಮೇರು ನಾಯಕನ ಅಗಲಿಕೆ ನೋವನ್ನು ಉಂಟು ಮಾಡಿದೆ ಎಂದು ಹೇಳಿದರು.
    ಸಭೆಯಲ್ಲಿ ವಕೀಲ ಸಂಘದ ಜಂಟಿ ಕಾರ್ಯದರ್ಶಿ ಮೋಹನ್, ಜಗದೀಶ್, ಯೋಗೇಶ್, ರಮೇಶ್, ವಿಜಯಕುಮಾರ್, ನಟರಾಜು, ಸುಂದರರಾಜು, ಶಿವಕುಮಾರ, ರಮೇಶ್, ಮಹೇಂದ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts