ಚಳ್ಳಕೆರೆ: ಅರ್ಹ ನೇಕಾರರಿಗೆ ಇಲಾಖೆಯ ವಸತಿ ಸೌಲಭ್ಯ, ಅಗತ್ಯ ಪರಿಕರಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಚೌಳೂರು ಉಣ್ಣೆ ಕೈಮಗ್ಗ ನೇಕಾರಿಕಾ ಮತ್ತು ಮಾರಾಟಗಾರರ ಸಹಕಾರ ಸಂಘದ ನೂತನ ಅಧ್ಯಕ್ಷ ಎಂ.ಹೊನ್ನಪ್ಪ ಹೇಳಿದರು.
ತಾಲೂಕಿನ ಚೌಳೂರಿನ ಉಣ್ಣೆ ಕೈಮಗ್ಗ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಏಳಿಗೆಗೆ ಶ್ರಮಿಸಲಾಗುವುದು ಎಂದರು.
ಜವಳಿ ಇಲಾಖೆ ಪ್ರವರ್ತನಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಅರ್ಹ ನೇಕಾರಿಕೆ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕತೆ ಮೆರೆಯಬೇಕು ಎಂದು ನೂತನ ಅಧ್ಯಕ್ಷರಿಗೆ ತಿಳಿಸಿದರು.
ಸಂಘದ ನಿರ್ದೇಶಕರಾದ ಕೆ.ವೀರಣ್ಣ, ಪಿ.ಕೆಂಚಪ್ಪ, ವಿ.ವಿರೂಪಾಕ್ಷಪ್ಪ, ಕೆಂಚಪ್ಪ, ಲಲಿತಮ್ಮ, ಪುಷ್ಪಾ, ಕಾರ್ಯದರ್ಶಿ ಟಿ.ಬಸವರಾಜ, ಸಹಾಯಕ ಜಿ.ಎನ್.ವೀರೇಶ್ಕುಮಾರ್, ಮಾಜಿ ಅಧ್ಯಕ್ಷ ಲೋಕೇಶ್ ಮತ್ತಿತರರಿದ್ದರು.