ಚಳ್ಳಕೆರೆ: ಹೊರವಲಯದ ಜಿಟಿಟಿಸಿ ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ 200 ಕಾರ್ಮಿಕರಿಗೆ ಭಾನುವಾರ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣೆ ನಡೆಸಿ ಕರೊನಾ ವೈರಸ್ ಜಾಗೃತಿ ಮೂಡಿಸಲಾಯಿತು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ಜಿಲ್ಲಾ ಆರ್ಆರ್ಟಿ ತಂಡದ ಎ.ಗಂಗಾಧರ, ಎಂ.ಪ್ರಸನ್ನಕುಮಾರ್, ಚಂದ್ರಪ್ಪ, ಕಾರ್ಮಿಕ ಇಲಾಖೆ ನಿರೀಕ್ಷಕ ಶಫೀವುಲ್ಲಾ, ಡಾ.ಸಂದೀಪ್, ಡಾ.ಮಂಜುನಾಥ ಮತ್ತಿತರರಿದ್ದರು.