More

    ರಾಜೀವ್ ಗಾಂಧಿ ಕೊಡುಗೆ ಅಪಾರ

    ಚಳ್ಳಕೆರೆ: ದೇಶದಲ್ಲಿನ ಬಡತನದ ನಿರ್ಮೂಲನೆಗೆ ರಾಜೀವ್ ಗಾಂಧಿ ಅವರ ಆಡಳಿತದಲ್ಲಿ ಜಾರಿಯಾದ ಹಲವು ಯೋಜನೆಗಳು ಪ್ರಸ್ತುತ ದಿನಗಳಲ್ಲಿಯೂ ಇವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಮಾತನಾಡಿದರು.

    ದೇಶದ ಸೇವೆಗಾಗಿ ಪ್ರಾಣವನ್ನೇ ಕಳೆದುಕೊಂಡ ಇತಿಹಾಸ ಇಂದಿರಾ ಗಾಂಧಿ ಅವರ ಮನೆತನಕ್ಕಿದೆ. ಅವರ ಸ್ಮರಣೆ ನಮ್ಮೆಲ್ಲರ ಹೊಣೆ. ಇಂದಿರಾಗಾಂಧಿ ಕನಸಿನಂತೆ ದೇಶದ ಅಭಿವೃದ್ಧಿಗೆ ರಾಜೀವ್ ಗಾಂಧಿ ಅವರ ಸೇವೆ ರಾಜಕೀಯ ರಂಗಕ್ಕೆ ಮಾದರಿಯಾಗಿ ಉಳಿದುಕೊಂಡಿದೆ ಎಂದು ಹೇಳಿದರು.

    ಮುಖಂಡ ಎಸ್.ಎಚ್.ಸೈಯದ್ ಮಾತನಾಡಿ, ಇಂದಿರಾ ಗಾಂಧಿ ಅವರ ಕುಟುಂಬ ಅಧಿಕಾರದ ಆಸೆಗಾಗಿ ರಾಜಕಾರಣ ಮಾಡಲಿಲ್ಲ. ಆದರೆ, ಇತ್ತೀಚೆಗೆ ಅಧಿಕಾರದ ದುರಾಸೆಗಾಗಿ ರಾಜಕಾರಣ ಮಾಡುವ ಪಕ್ಷದಿಂದ ದೇಶದಲ್ಲಿ ಏಕತೆ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

    ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಗೀತಾಬಾಯಿ, ನಗರಸಭೆ ಸದಸ್ಯರಾದ ಕೆ.ವೀರಭದ್ರಯ್ಯ, ಆರ್.ಮಂಜುಳಾ, ವೈ.ಪ್ರಕಾಶ್, ತಾಪಂ ಸದಸ್ಯ ಜಿ.ವೀರೇಶ್, ಮುಖಂಡರಾದ ಕಿರಣ್ ಶಂಕರ್, ಆರ್.ಪ್ರಸನ್ನಕುಮಾರ್, ಅನ್ವರ್ ಮಾಸ್ಟರ್, ಶಿವಸ್ವಾಮಿ, ಓ.ಆಂಜನೇಯ, ಮೂಡಲಗಿರಿಯಪ್ಪ, ರಾಘವೇಂದ್ರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts