More

    ಅಂಬೇಡ್ಕರ್ ಜಯಂತಿ ಸಂಭ್ರಮ ಕಣ್ಮರೆ

    ಚಳ್ಳಕೆರೆ: ಅಂಬೇಡ್ಕರ್ ಜಯಂತಿಯ ಸಾಮಾಜಿಕ ಸಂಭ್ರಮ ಕಣ್ಮರೆಯಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಹೇಳಿದರು.

    ತಾಲೂಕಿನ ಎನ್. ಗೌರೀಪುರದಲ್ಲಿ ಮಂಗಳವಾರ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕಾಲನಿ ಜನರಿಗೆ ಸಿಹಿ ಹಂಚುವ ಮೂಲಕ ಸರಳ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

    ಐದಾರು ವರ್ಷಗಳಿಂದ ನಿರಂತರವಾಗಿ ಸಾರ್ವತ್ರಿಕ ಚುನಾವಣೆಯಿಂದ, ಈಗ ಕರೊನಾ ಕಾರಣಕ್ಕೆ ಅಂಬೇಡ್ಕರ್ ಜಯಂತಿ ಸಂಭ್ರಮಕ್ಕೆ ಅಡ್ಡಿಯಾಗಿದೆ. ಇದನ್ನೆಲ್ಲ ಗಮನಿಸಿದರೆ ಇತ್ತೀಚಿನ ದಿನಗಳಲ್ಲಿ ಸಮಾಜದವರೆಲ್ಲ ಸೇರಿ ಅಥವಾ ಆಯಾ ಸಮುದಾಯದವರು ಒಟ್ಟುಗೂಡಿ ಆಚರಿಸುವ ಜಯಂತ್ಯುತ್ಸವಗಳು ಬಹಳ ವಿರಳವಾಗಿವೆ ಎಂದರು.

    ಗ್ರಾಮಸ್ಥರಾದ ನಾಗೇಂದ್ರಮ್ಮ, ಗುರುಶಾಂತಯ್ಯ, ಒಬಳೇಶಿ, ಪ್ರಶಾಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts