More

    ಆಡಂಬರದಿಂದ ಹಬ್ಬ ಮಾಡಿ ಅಂತ ಯಾವ ಧರ್ಮ-ದೇವರೂ ಹೇಳಲ್ಲ: ಕೇಂದ್ರ ಸಚಿವ ಡಾ.ಹರ್ಷವರ್ಧನ್​

    ನವದೆಹಲಿ: ಆಡಂಬರದಿಂದ ಹಬ್ಬ ಮಾಡಿ ಎಂದು ಯಾವ ಧರ್ಮ-ದೇವರೂ ಹೇಳಲ್ಲ ಎಂಬುದಾಗಿ ಕೇಂದ್ರ ಸಚಿವ ಡಾ.ಹರ್ಷವರ್ಧನ್​ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ. ದಸರಾ-ದೀಪಾವಳಿ ಹತ್ತಿರ ಬಂದರೂ ಕರೊನಾ ಹಾವಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ.

    ‘ಸಂಡೇ ಸಂವಾದ್’​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಹಬ್ಬದ ಆಚರಣೆ ಹತ್ತಿರ ಬಂದಿದೆ. ಹೀಗಾಗಿ ಸಾರ್ವಜನಿಕರು ಜನಜಂಗುಳಿಯಿಂದ ದೂರವಿರುವ ಜತೆಗೆ ಕೋವಿಡ್​ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

    ಸಾರ್ವಜನಿಕರು ಹೊರಗಿನ ಪೆಂಡಾಲ್​-ಉತ್ಸವಗಳ ಬದಲು ತಂತಮ್ಮ ಮನೆಯಲ್ಲಿ, ಮನೆಯವರು ಹಾಗೂ ಪ್ರೀತಿ-ಪಾತ್ರರೊಂದಿಗಷ್ಟೇ ಹಬ್ಬ ಆಚರಿಸಿ. ಮಂದಿರ-ಮಸೀದಿಗೇ ಹೋಗಿ ಪ್ರಾರ್ಥಿಸಬೇಕು, ಆಡಂಬರದಿಂದಲೇ ಹಬ್ಬ ಆಚರಿಸಬೇಕು ಎಂದು ಯಾವ ಧರ್ಮ-ದೇವರೂ ಹೇಳಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

    ‘ನಿಮ್ಮ ಗುರಿ ಮೇಲೆ ಗಮನವಿಡಿ’ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ. ಈಗ ನನ್ನ ಗುರಿ, ನಿಮ್ಮ ಗುರಿ ಎರಡೂ ಒಂದೇ. ಕೋವಿಡ್​ ಸೋಂಕನ್ನು ಇಲ್ಲವಾಗಿಸುವುದು ಈಗ ನಮ್ಮ ಗುರಿ, ಇದೇ ನಮ್ಮ ಧರ್ಮ ಎಂಬುದಾಗಿ ಸಚಿವರು ಮನವಿ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts