More

    ತಂಗಡಗಿ ಗೆಲುವು ಸಂಭ್ರಮಿಸಿದ ಕಾರ್ಯಕರ್ತರು: 42 ಸಾವಿರ ಅಂತರದಿಂದ ದಢೇಸುಗೂರು ಸೋಲು

    ಕನಕಗಿರಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರದಂದು ವಿಜಯೋತ್ಸವ ಆಚರಿಸಿದರು

    .
    ಗೆಲುವಿನ ಭರವಸೆಯಲ್ಲಿದ್ದ ಶಿವರಾಜ ತಂಗಡಗಿ ಶುಕ್ರವಾರವೇ ತಮ್ಮ ಪಕ್ಷದ ಮುಖಂಡರು, ಹಿತೈಷಿಗಳೊಂದಿಗೆ ದೇವಸ್ಥಾನಗಳಿಗೆ ತೆರಳಿ ರಾತ್ರಿ ಕೊಪ್ಪಳದಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರದಂದು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ನಡೆದ ಮತ ಎಣಿಕೆ ಆರಂಭದಲ್ಲಿ ನಡೆದ ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿದ್ದಲ್ಲದೇ, ಪ್ರತಿ ಸುತ್ತಿನಲ್ಲೂ ಮುನ್ನೆಡೆ ಕಾಯ್ದುಕೊಳ್ಳುತ್ತಾ ಬಂದರು. ಕಾರ್ಯಕರ್ತರು, ಅಭಿಮಾನಿಗಳು ರಸ್ತೆಗಿಳಿದು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.


    ದ್ವಿಚಕ್ರ ವಾಹನ, ಟ್ರಾಕ್ಟರ್ ಮೂಲಕ ಸಂಚರಿಸಿ ವಿಜಯೋತ್ಸವ ಆಚರಿಸಿದರು. ಅಲ್ಲಲ್ಲಿ ಪಟಾಕಿ ಸಿಡಿಸಿ, ಕಾಂಗ್ರೆಸ್ ಧ್ವಜ ಹಿಡಿದು ಬೈಕ್ ರ‌್ಯಾಲಿ ಮಾಡುತ್ತಿರುವುದು ಸಾಮಾನ್ಯವಾಗಿತ್ತು. 19 ಸುತ್ತುಗಳ ಎಣಿಕೆ ಕಾರ್ಯ ಮುಗಿದು ತಂಗಡಗಿ 1,06,164 ಮತಗಳನ್ನು ಪಡೆದುಕೊಂಡು ತಮ್ಮ ಎದುರಾಳಿ ಬಸವರಾಜ ದಢೇಸುಗೂರುರನ್ನು 42,632 ಅಂತರದಿಂದ ಸೋಲುಣಿಸಿದರು. ಇನ್ನು ಫಲಿತಾಂಶ ಪ್ರಕಟಗೊಂಡ ಬಳಿಕ ಕೊಪ್ಪಳದಿಂದ ಪಟ್ಟಣಕ್ಕೆ ಆಗಮಿಸಿದ ಶಿವರಾಜ ತಂಗಡಗಿ ವಿಜಯೋತ್ಸವ ಆಚರಿಸಿ, ಕನಕಾಚಲ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts