More

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜೈನಮುನಿ ಹತ್ಯೆ ರೀತಿಯ ಪ್ರಕರಣ ಹೊಸತಲ್ಲ: ಮಾಜಿ ಸಚಿವ ಸಿ.ಸಿ. ಪಾಟೀಲ

    ಗದಗ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿಕೆ ನೀಡಿದ್ದು ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದ್ದಾರೆ.

    ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಸಿ‌. ಪಾಟೀಲ” ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇದು ಮೊದಲೇನಲ್ಲ. ಈ‌ ಮೊದಲು ಕಾಂಗ್ರೆಸ್ ಸರ್ಕಾರ ಇದ್ದಾಗ ಈ ರೀತಿ ಘಟನೆಗಳು ಜರುಗಿವೆ.

    ಇದನ್ನೂ ಓದಿ: ಜೈನಮುನಿ ಅವರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಲು ಶಾಸಕ ಅಭಯ್ ಪಾಟೀಲ ಒತ್ತಾಯ

    ಪ್ರವೀಣ ನೆಟ್ಟಾರು ಹತ್ಯೆ ಏನಾಯಿತು. ಕೇರಳದಿಂದ ನಾಲ್ಕೈದು ಸಾವಿರ‌ ಜನ ಹೇಗೆ ಬಂದ್ರು? ಮೂಕಪ್ರೇಕ್ಷಕರಾಗಿ ಪೊಲೀಸರು ಹೇಗೆ‌ ಸುಮ್ಮನಿದ್ದರು? ಈ ರೀತಿಯ‌ ಘಟನೆಗಳು ಮೊದಲೇನಲ್ಲ

    ಈ‌ ಸರ್ಕಾರದ ಅವಧಿಯಲ್ಲಿ ಇನ್ನು ನಿರಂತರವಾಗಿ ಈ ರೀತಿ ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳಲ್ಲಿ ನಿಜವಾದ ಆರೋಪಿಗಳನ್ನು ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡಿಯೇ ಮಾಡುತ್ತದೆ” ಎಂದಿದ್ದಾರೆ.

    ಇದನ್ನೂ ಓದಿ: ಜೈನಮುನಿಗಳಿಗೆ ಸರ್ಕಾರ ರಕ್ಷಣೆ ನೀಡಲಿ, ಹಂತಕರಿಗೆ ತಕ್ಕ ಶಿಕ್ಷೆಯಾಗಲಿ: ಡಾ.ಡಿ.ವೀರೇಂದ್ರ ಹೆಗ್ಗಡೆ

    ಈ ಸಂದರ್ಭ ಅಮರ್, ಅಕ್ಬರ್, ಅಂತೋನಿ‌ ಸಿನಿಮಾ ಉದಾಹರಣೆ ಕೊಟ್ಟ ಸಚಿವರು “ಅಮರ್ ಸಾಯುತ್ತಾನೆ…ಅಕ್ಬರ್, ಮತ್ತು ಅಂತೋನಿ ರಾಜ್ಯದಲ್ಲಿ ದರ್ಬಾರ್ ಶುರು‌ಮಾಡಿದ್ರು. ಅಮರ್ ಇದ್ದವರು ತಣ್ಣಗೆ ಮನೇಲಿ ಕೂರೋದು ಚಲೋ‌” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts