More

    ರಚಿತಾ ರಾಮ್​ ಹೇಳಿಕೆಗೆ ಟೀಕೆ; ಮದ್ದೂರಿನಲ್ಲಿ ಕೇಸ್‌ ದಾಖಲು!

    ಬೆಂಗಳೂರು: ರಚಿತಾ ರಾಮ್​ಗೆ ವಿವಾದಗಳು ಹೊಸದೇನಲ್ಲ. ಈಗಾಗಲೇ ಅವರು ಸಾಕಷ್ಟು ವಿವಾದಗಳಿಗೆ ಸಿಲುಕಿದ್ದಾರೆ. ಅದನ್ನೆಲ್ಲ ದಾಟಿ ಅವರು ಹೊರಬಂದಿದ್ದಾರೆ. ಈಗ ಅವರು ಇನ್ನೊಂದು ವಿವಾದಕ್ಕೀಡಾಗಿದ್ದಾರೆ. ಅಷ್ಟೇ ಅಲ್ಲ, ಅವರ ಮೇಲೆ ಕೇಸ್​ ಸಹ ದಾಖಲಾಗಿದೆ.

    ಇದನ್ನೂ ಓದಿ: ಅಜನೀಶ್​ ಲೋಕನಾಥ್​ಗೆ ಟಾಲಿವುಡ್​ನಲ್ಲಿ ಫುಲ್​ ಡಿಮ್ಯಾಂಡ್!

    ರಚಿತಾ ಅಭಿನಯದ ‘ಕ್ರಾಂತಿ’ ಚಿತ್ರವು ಇದೇ ತಿಂಗಳು 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಸಂಭ್ರಮದಲ್ಲಿರುವ ರಚಿತಾ ಒಂದು ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಅವರು, ‘ಜನವರಿ 26 ಎಂದಾಕ್ಷಣ ಗಣರಾಜ್ಯೋತ್ಸವ ನೆನಪಿಗೆ ಬರುತ್ತದೆ. ಈ ವರ್ಷ ಗಣರಾಜ್ಯೋತ್ಸವ ಅನ್ನೋದನ್ನು ಮರೆತುಬಿಡಿ. ಅಂದು ‘ಕ್ರಾಂತಿ’ ಉತ್ಸವ ಅಷ್ಟೇ. ಬಂದು ಸಿನಿಮಾ ನೋಡಿ ಎಂದು ನಾನು ನಿಮಗೆ ಆಹ್ವಾನ ಕೊಡುವುದಿಲ್ಲ. ಏಕೆಂದರೆ, ಸಿನಿಮಾ ನೋಡಬೇಕು ಎಂದು ನೀವು ಈಗಾಗಲೇ ನಿರ್ಧಾರ ಮಾಡಿದ್ದೀರಾ’ ಎಂದಿದ್ದರು.

    ಇದನ್ನೂ ಓದಿ: ‘ಎಮರ್ಜೆನ್ಸಿ’ ಚಿತ್ರಕ್ಕಾಗಿ ಮನೆ ಅಡವಿಟ್ಟಿದ್ದಾರಂತೆ ಕಂಗನಾ ರಣಾವತ್​!

    ರಚಿತಾ ಅವರ ಈ ಹೇಳಿಕೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈಗ ಅವರ ವಿರುದ್ಧ ಕೇಸ್​ ದಾಖಲಾಗಿದೆ. ಅವರ ಹೇಳಿಕೆಯನ್ನು ಖಂಡಿಸಿರುವ ಮದ್ದೂರಿನ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ, ಈ ಕುರಿತು ಮದ್ದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿರುವ ರಚಿತಾ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ದೂರಿನಲ್ಲಿ ಒತ್ತಾಯಿಸಿದ್ದಾರೆ.

    ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾಳೆ ರವೀನಾ ಟಂಡನ್​ ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts