More

    ನಿಷೇಧಾಜ್ಞೆ, ರಾತ್ರಿ ನಿರ್ಬಂಧ ಉಲ್ಲಂಘಿಸಿದ ಕನ್ನಡಕ ಅಂಗಡಿ ಮಾಲೀಕನ ವಿರುದ್ಧ ಕೇಸು

    ಉಳ್ಳಾಲ: ನಿಷೇಧಾಜ್ಞೆ ಹಾಗೂ ರಾತ್ರಿ ನಿರ್ಬಂಧ ಸಂದರ್ಭ ಮಾಸ್ತಿಕಟ್ಟೆಯಲ್ಲಿ ತೆರೆಯಲಾಗಿದ್ದ ಕನ್ನಡಕ ಮಾರಾಟದ ಅಂಗಡಿ ಮುಚ್ಚುವಂತೆ ಹೇಳಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಂಗಡಿ ಸಿಬ್ಬಂದಿ ಹಾಗೂ ಮಾಲೀಕರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


    ಆ.4ರಂದು ಸಾಯಂಕಾಲ 6.15ಕ್ಕೆ ಮಾಸ್ತಿಕಟ್ಟೆ ಬಳಿ ಉಳ್ಳಾಲ ಠಾಣಾ ಪಿಎಸ್‌ಐ ರೇವಣ ಸಿದ್ಧಪ್ಪ ಅವರು ಸಿಬ್ಬಂದಿ ಜತೆ ರೌಂಡ್ಸ್‌ನಲ್ಲಿದ್ದ ಸಂದರ್ಭ ಕನ್ನಡಕ ಮಾರಾಟದ ಅಂಗಡಿ ತೆರೆದಿದ್ದು ವ್ಯಾಪಾರ, ವಹಿವಾಟು ನಡೆಯುತ್ತಿತ್ತು. ಅಂಗಡಿ ಮುಚ್ಚುವಂತೆ ಪಿಎಸ್‌ಐ ತಿಳಿಸಿದಾಗ ಸಿಬ್ಬಂದಿ ಉಡಾಫೆಯಿಂದ ಮಾತನಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಜತೆಗೆ ಅಂಗಡಿ ಮಾಲೀಕ ಶಬೀಲ್ ಅಹಮ್ಮದ್, ಪೊಲೀಸ್ ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎಂದು ಕೇಸು ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts