More

    ಮುಳುವಾಯ್ತು ಅತಿಯಾದ ವೇಗ… ಒಂದೇ ಕುಟುಂಬದ ಐವರ ದುರಂತ ಅಂತ್ಯ

    ಹೈದ್ರಾಬಾದ್: ಭೀಕರ ರಸ್ತೆ ಅಪಘಾತದಲ್ಲಿ ತಂದೆ- ತಾಯಿ, ಮಗು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಸಂಗಾರೆಡ್ಡಿ ಜಿಲ್ಲೆಯ ಅಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೃತರನ್ನು ವಿವೇಕ್ (06), ಪೋಷಕರಾದ ಅಂಬಾದಾಸ್ ಮತ್ತು ಪದ್ಮ ಎಂದು ಗುರುತಿಸಲಾಗಿದ್ದು, ಉಳಿದಿಬ್ಬರು ಸಂಬಂಧಿಕರೆಂದು ತಿಳಿದು ಬಂದಿದೆ. ಮೇದಕ್​ ಜಿಲ್ಲೆಯ ಕುಲ್ಚಾರಾಮ್ ನಗರದ ಕುಟುಂಬವೊಂದು, ತಮ್ಮ ಮಗುವಿನ ಆರೋಗ್ಯ ತಪಾಸಣೆ ನಡೆಸಿ ರಂಗಾರೆಡ್ಡಿಯಿಂದ ವಾಪಸ್ ಬರುತ್ತಿದ್ದರು. ಈ ವೇಳೆ ಕಾರಿನ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿಗೆ ಬರುತ್ತಿದ್ದ ಟ್ರಕ್​​ಗೆ ಗುದ್ದಿದ್ದಾನೆ.

    ಇದನ್ನೂ ಓದಿ: ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ? ಮಗಳ ಸಾವಿನ ಬೆನ್ನಲ್ಲೇ ತಂದೆ-ತಾಯಿ ದುರಂತ ಅಂತ್ಯ

    ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸಂಗಾರೆಡ್ಡಿಯಲ್ಲಿ ಬಾಲಕ ವಿವೇಕ್​ ಆರೋಗ್ಯ ತಪಾಸಣೆ ಮುಗಿಸಿ ಕುಟುಂಬದವರು ವಾಪಸ್​ ಬರುತ್ತಿದ್ದರು. ಈ ವೇಳೆ ಕಾರು ಅತಿ ಹೆಚ್ಚು ವೇಗದಲ್ಲಿದ್ದು, ಮಧ್ಯಾಹ್ನ 3:15 ರ ಸುಮಾರಿಗೆ ಅಪಘಾತವಾಗಿದೆ ಎಂದು ತಿಳಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಐವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts