ಮಂಗಳೂರು: ಸೇತುವೆಗೆ ಡಿಕ್ಕಿ ಹೊಡೆದು ನೀರಿಗೆ ಕಾರು ಬಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಪಘಾತದ ನಂತರವೂ ಯುವಕರಿಬ್ಬರು ಮೊಬೈಲ್ ಬಳಸಿರುವುದು ತನಿಖೆಯಿಂದ ಬಯಲಾಗಿದೆ.
ಹಾಗಾದರೆ ಈ ಇಬ್ಬರು ಯುವಕರು ಎಲ್ಲಿಗೆ ಹೋದ್ರು, ಹೊಳೆಯಲ್ಲೂ ಇಬ್ಬರು ಪತ್ತೆಯಾಗಲಿಲ್ಲ ಎಂದ ಕೂಡಲೇ ತನಿಖೆಗೆ ಇಳಿದ ಪೊಲೀಸರೇ ಶಾಕ್ ಆಗಿದ್ದಾರೆ.
ಅಪಘಾತದ ನಂತರ ಮನೆಯವರಿಗೆ ಕಾಲ್ ಮಾಡಿದ್ದ ಕಾರಿನಲ್ಲಿದ್ದ ಯುವಕರು ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎಂದಷ್ಟೇ ಹೇಳಿರುವುದು ತಿಳಿದುಬಂದಿದೆ. ಯುವಕರು ಸದ್ಯ ಮನೆಗೆ ಕರೆ ಬಂದ ನಂಬರ್ನಿಂದ ಲೊಕೇಶನ್ ಟ್ರೇಸ್ ಮಾಡುತ್ತಿದೆ. ಸ್ಥಳೀಯ ಆಸ್ಪತ್ರೆಗಳಲ್ಲಿಯೂ ವಿಚಾರಿಸಲಾಗುತ್ತಿದ್ದು, ಶೀಘ್ರದಲ್ಲೇ ಇಬ್ಬರನ್ನು ಪತ್ತೆ ಹಚ್ಚುವ ಸಾಧ್ಯತೆ ಇದೆ.
ಕಾರನ್ನು ತಡೆದಿದ್ದ ಪೊಲೀಸರು: ನಿನ್ನೆ ರಾತ್ರಿ ಕಾರಿನಲ್ಲಿ ಬಂದ ಈ ಇಬ್ಬರನ್ನು ತಡೆದಿದ್ದ ಪೊಲೀಸರು ವಿಚಾರಿಸಿ ಕಳುಹಿಸಿದ್ದಾರೆ.ಸವಣೂರು ಚೆಕ್ ಪೋಸ್ಟ್ನಲ್ಲಿ ಸಿಂಗಲ್ ಹೆಡ್ ಲೈಟ್ ಹಾಕಿ ಬಂದಿದ್ದ ಕಾರನ್ನು ತಡೆದಿದ್ದ ಪೊಲೀಸರು, ಎಲ್ಲಿಂದ ಎಲ್ಲಿಗೆ ಪ್ರಯಾಣ ಎಂದು ವಿಚಾರಿಸಿದ್ದರು. ಈ ವೇಳೆ ಪುತ್ತೂರಿನಿಂದ ಗುತ್ತಿಗಾರಿಗೆ ಹೋಗುವುದಾಗಿ ಈ ಯುವಕರು ಹೇಳಿದ್ದರು.
ಗುತ್ತಿಗಾರಿನ ಅಕ್ಕನ ಮನೆಗೆ ಹೋಗುವುದಾಗಿ ಹೇಳಿದ್ದರಿಂದ, ಯುವಕರುನಿದ್ದೆಯ ಮಂಪರಿನಲ್ಲಿ ಇದ್ದಂತೆ ಕಂಡುಬಂದಿದ್ದ ಕಾರು ಚಾಲಕನನ್ನು ಹುಷಾರಾಗಿ ಹೋಗುವಂತೆ ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ಪೊಲೀಸರೇ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)