More

    ಭೀಕರ ಅಪಘಾತ: ನಾಲೆಗೆ ಬಿದ್ದ ಕಾರು, ನಾಲ್ವರ ಸಾವು, ಚಾಲಕನೊಬ್ಬನೇ ಬಚಾವ್!

    ಮಂಡ್ಯ: ಕಾರೊಂದು ನಾಲೆಗೆ ಬಿದ್ದು ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಸಾವಿಗೀಡಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಇಂದು ಈ ಭೀಕರ ಅಪಘಾತ ಸಂಭವಿಸಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೀದಾ ನಾಲೆಗೆ ಹೋಗಿ ಬಿದ್ದಿದೆ. ಕಾರಿನಲ್ಲಿ ಐವರು ಇದ್ದಿದ್ದು, ಚಾಲಕ ಹೊರತುಪಡಿಸಿ ಎಲ್ಲರೂ ಸಾವಿಗೀಡಾಗಿದ್ದಾರೆ.

    ಇದನ್ನೂ ಓದಿ: ಹಬ್ಬದ ಸಂಭ್ರಮದಲ್ಲಿ ಹೆಜ್ಜೆ ಹಾಕುತ್ತ ಕುಸಿದು ಬಿದ್ದ ವ್ಯಕ್ತಿ; ಹೃದಯಾಘಾತಕ್ಕೀಡಾಗಿ ಸಾವು

    ಸಂಜನಾ (17), ಮಮತಾ (45), ಮಹದೇವ (55), ರೇಖಾ (36) ಸಾವಿಗೀಡಾದವರು. ಮೃತಪಟ್ಟವರೆಲ್ಲರೂ ಗಾಮನಹಳ್ಳಿ ಗ್ರಾಮದವರು. ಇವರು ದೇವತಾಕಾರ್ಯಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ.

    ಇವರು ಗೊರವನಹಳ್ಳಿಯಿಂದ ದೊಡ್ಡ ಮಲಗೂಡಿಗೆ ತೆರಳುತ್ತಿದ್ದಾಗ ಇಂಡಿಕಾ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ನಾಲೆಗೆ ಬಿದ್ದಿದೆ. ಮಮತಾ ಎಂಬಾಕೆಯ ಪುತ್ರ ಮನೋಜ್ ಕಾರು ಚಲಾಯಿಸುತ್ತಿದ್ದು, ಆತ ಮಾತ್ರ ಬಚಾವಾಗಿದ್ದು, ಮತ್ತೆಲ್ಲರೂ ಸಾವಿಗೀಡಾದರು.

    ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts