ಮೈಸೂರು: ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಬಹಿರಂಗ ಪ್ರಚಾರ ನಡೆಸಿ ಮತದಾರರನ್ನು ಓಲೈಸಿಕೊಳ್ಳಲು ಮುಂದಾಗಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾನಕ್ಕೆ ಒಂದು ದಿನ ಬಾಕಿ ಇರುವಾಗಲೂ ಮತದಾರರ ಮನೆ ಮನೆಗೆ ತೆರಳಿ ಮತ ಬೇಟೆ ನಡೆಸಿದರು. ಅಂತಿಮ ಕ್ಷಣದಲ್ಲಿಯೂ ಮತದಾರರ ಮನಗೆಲ್ಲಲು ಕಸರತ್ತು ನಡೆಸಿದರು.
ಧ್ವನಿವರ್ಧಕ, ವಾಹನಗಳ ಅಬ್ಬರವಿಲ್ಲದೇ ಕಾರ್ಯಕರ್ತರು, ಅಭ್ಯರ್ಥಿಗಳು ಗುರುವಾರ ಮನೆ, ಮನೆಗೆ ತೆರಳಿ ಅಂತಿಮವಾಗಿ ಮತದಾರರ ಮನಗೆಲ್ಲಲು ಮುಂದಾದರು.