More

    35 ಸಾವಿರ ರನ್ಸ್​ಗೆ ಸಿಕ್ಕಿದ್ದರೆ 45 ಸಾವಿರ ಸಾಂಗ್ಸ್​ಗೆ ಏಕೆ ಸಿಗಬಾರದು?

    ಬೆಂಗಳೂರು: ಅಪ್ರತಿಮ ಗಾಯಕ, ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯ ಬೆನ್ನಿಗೇ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿ ಗೌರವಿಸಬೇಕು ಎಂಬ ಒತ್ತಾಯವೊಂದು ಕೇಳಿಬಂದಿದೆ. ಆ ನಿಟ್ಟಿನಲ್ಲಿ ಅಭಿಯಾನವೊಂದು ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ.

    #bharatratnaforspb ಎಂಬ ಹ್ಯಾಷ್​​ಟ್ಯಾಗ್​ನಲ್ಲಿ ಶನಿವಾರವೇ ಅಭಿಯಾನ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ನೆಟ್ಟಿಗರು ಹಾಗೂ ಎಸ್​ಪಿಬಿ ಅವರ ಅಭಿಮಾನಿಗಳು ಅವರಿಗೆ ಭಾರತ ರತ್ನ ಸಿಗಲೇಬೇಕು ಎಂದು ವಿಧವಿಧವಾಗಿ ಆಗ್ರಹಿಸಿದ್ದಾರೆ. ಒಬ್ಬ ನೆಟ್ಟಿಗರಂತೂ “35 ಸಾವಿರ ರನ್​ಗಳಿಗೆ ಭಾರತ ರತ್ನ ಸಿಕ್ಕಿದ್ದರೆ 45 ಸಾವಿರ ಹಾಡುಗಳಿಗೆ ಏಕೆ ಸಿಗಬಾರದು?” ಎನ್ನುವ ಮೂಲಕ ಎಸ್​​ಪಿಬಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ದಾರೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬುದಾಗಿ ಪುದುಚೆರಿಯ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ. ಮತ್ತೊಂದೆಡೆ ಬಹುಭಾಷಾ ನಟ ಅರ್ಜುನ್​ ಸರ್ಜಾ ಕೂಡ ಎಸ್​ಪಿಬಿ ಅವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ಲಭಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts