More

    ಉದ್ಯಮಿಯ ಅಪಹರಣಕಾರನನ್ನು ಕೆಲವೇ ತಾಸುಗಳಲ್ಲಿ ಬೆನ್ನಟ್ಟಿ ಸೆರೆಹಿಡಿದ ಮಲ್ಲೇಶ್ವರಂ ಪೊಲೀಸರು

    ಬೆಂಗಳೂರು: ಉದ್ಯಮಿಯನ್ನು ಅಪಹರಣ ಮಾಡಿದ ಆರೋಪಿ ಸಯ್ಯದ್​ ರಾಹಿಲ್​ ಎಂಬಾತನನ್ನು ಬೆನ್ನಟ್ಟಿದ ಮಲ್ಲೇಶ್ವರಂ ಪೊಲೀಸರು ಕೆಲವೇ ತಾಸಿನಲ್ಲಿ ಆತನನ್ನು ಬಂಧಿಸಿದ್ದಾರೆ.

    ಸುದೀಪ್ ಎಂಬ ಉದ್ಯಮಿಯನ್ನು ಸಯ್ಯದ್​ ರಾಹಿಲ್​ ಕೆಆರ್​ಪುರ ಬಳಿ ಅಪಹರಣ ಮಾಡಿದ್ದ. ದೂರು ದಾಖಲಾದ ಕೆಲವೇ ತಾಸುಗಳಲ್ಲಿ ಆರೋಪಿ ಸಯ್ಯದ್​​ನನ್ನು ಪೊಲೀಸರು ಗೋರಿಪಾಳ್ಯದ ಬಳಿ ಇರುವ ಸ್ಮಶಾನದ ಬಳಿ ಬಂಧಿಸಿದ್ದಾರೆ.

    ಸುದೀಪ್​ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಹಣಕಾಸು ವ್ಯವಹಾರ ಕೂಡ ನಡೆಸುತ್ತಿದ್ದರು. ಆರೋಪಿ ಸಯ್ಯದ್​ನೊಂದಿಗೆ ಸುದೀಪ್​ ಸ್ನೇಹ ಬೆಳೆಸಿದ್ದರು. ಹೀಗಾಗಿ ಇಬ್ಬರು ಸೇರಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು.

    ಸುದೀಪ್​ ಇತ್ತೀಚೆಗೆ ಸಯ್ಯದ್​ ಬಳಿ ಹಣ ಸಾಲ ಪಡೆದಿದ್ದರು. ಮಾಡಿದ ಸಾಲ ಮರುಪಾತಿ ಮಾಡದ ಹಿನ್ನೆಲೆಯಲ್ಲಿ ಸಯ್ಯದ್​ ಬೇಸತ್ತಿದ್ದ. ಸುದೀಪ್​ಗೆ ಕರೆ ಮಾಡಿ ಹಣ ಕೊಡುವಂತೆ ಒತ್ತಡ ಹಾಕುತ್ತಿದ್ದ. ಒತ್ತಡ ಹಾಕಿದರೂ ಸುದೀಪ್​ ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ಸಯ್ಯದ್​ ಕೆಆರ್​ಪುರಂಗೆ ತೆರಳಿ ಮನೆಯಲ್ಲಿದ್ದ ಸುದೀಪ್​ನಲ್ಲಿ ಹೊರಗಡೆ ಕರೆಸಿಕೊಂಡು ಅಪಹರಣ ಮಾಡಿದ್ದ. ನಂತರ ಸುದೀಪ್​ ಕುಟುಂಬದವರಿಗೆ ಸಯ್ಯದ್​ ಕರೆ ಮಾಡಿ 12 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದ. ಸುದೀಪ್​ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts