ಬೆಂಗಳೂರು: ಉದ್ಯಮಿಯನ್ನು ಅಪಹರಣ ಮಾಡಿದ ಆರೋಪಿ ಸಯ್ಯದ್ ರಾಹಿಲ್ ಎಂಬಾತನನ್ನು ಬೆನ್ನಟ್ಟಿದ ಮಲ್ಲೇಶ್ವರಂ ಪೊಲೀಸರು ಕೆಲವೇ ತಾಸಿನಲ್ಲಿ ಆತನನ್ನು ಬಂಧಿಸಿದ್ದಾರೆ.
ಸುದೀಪ್ ಎಂಬ ಉದ್ಯಮಿಯನ್ನು ಸಯ್ಯದ್ ರಾಹಿಲ್ ಕೆಆರ್ಪುರ ಬಳಿ ಅಪಹರಣ ಮಾಡಿದ್ದ. ದೂರು ದಾಖಲಾದ ಕೆಲವೇ ತಾಸುಗಳಲ್ಲಿ ಆರೋಪಿ ಸಯ್ಯದ್ನನ್ನು ಪೊಲೀಸರು ಗೋರಿಪಾಳ್ಯದ ಬಳಿ ಇರುವ ಸ್ಮಶಾನದ ಬಳಿ ಬಂಧಿಸಿದ್ದಾರೆ.
ಸುದೀಪ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಹಣಕಾಸು ವ್ಯವಹಾರ ಕೂಡ ನಡೆಸುತ್ತಿದ್ದರು. ಆರೋಪಿ ಸಯ್ಯದ್ನೊಂದಿಗೆ ಸುದೀಪ್ ಸ್ನೇಹ ಬೆಳೆಸಿದ್ದರು. ಹೀಗಾಗಿ ಇಬ್ಬರು ಸೇರಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು.
ಸುದೀಪ್ ಇತ್ತೀಚೆಗೆ ಸಯ್ಯದ್ ಬಳಿ ಹಣ ಸಾಲ ಪಡೆದಿದ್ದರು. ಮಾಡಿದ ಸಾಲ ಮರುಪಾತಿ ಮಾಡದ ಹಿನ್ನೆಲೆಯಲ್ಲಿ ಸಯ್ಯದ್ ಬೇಸತ್ತಿದ್ದ. ಸುದೀಪ್ಗೆ ಕರೆ ಮಾಡಿ ಹಣ ಕೊಡುವಂತೆ ಒತ್ತಡ ಹಾಕುತ್ತಿದ್ದ. ಒತ್ತಡ ಹಾಕಿದರೂ ಸುದೀಪ್ ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ಸಯ್ಯದ್ ಕೆಆರ್ಪುರಂಗೆ ತೆರಳಿ ಮನೆಯಲ್ಲಿದ್ದ ಸುದೀಪ್ನಲ್ಲಿ ಹೊರಗಡೆ ಕರೆಸಿಕೊಂಡು ಅಪಹರಣ ಮಾಡಿದ್ದ. ನಂತರ ಸುದೀಪ್ ಕುಟುಂಬದವರಿಗೆ ಸಯ್ಯದ್ ಕರೆ ಮಾಡಿ 12 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದ. ಸುದೀಪ್ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)